ಬಹಳ ಪ್ರೀತಿಯಿಂದ ಬಿಳುಪಿನ ದಪ್ಪ ಕಾಗದದ ತುಂಬಾ ಮುದ್ದು ಮುದ್ದಾಗಿ ನಾ ಬರೆದ ಪ್ರೇಮ ಪತ್ರ , ನನ್ನವಳ ಕಣ್ ಕಡಲಲ್ಲಿ ತೇಲಿ ತೇಲಿ ಅವಳ ಮನದ ಸಾಗರವ ಸೇರುವ ಮುನ್ನ, ಅವಳ ತುಂಟ ತಮ್ಮನ ಕೈಸೇರಿ ಕೆಸರು ನೀರಲ್ಲಿ ದೋಣಿಯಾಗಿ ತೇಲಿ ಹೋಗಿ ಹತ್ತಿರದ ಚರಂಡಿಯಲ್ಲಿ ಮುಳುಗಿ ಬಿಟ್ಟಿತ್ತು.
ನೆನಪಿನಾ ಮೋಡದಿಂದ ಸುರಿಯುವ ಅವಳ ಕನಸುಗಳೆನುವ ಮಳೆಹನಿಗಳಿಗೆ, ಈ ಇರುಳ ಬಯಲಿನಲಿ ನನ್ನ ನಾ ತೆರೆದಿಡುವಾಸೆ; ಅದು ನೀಡುವ ಮುದದ ತಂಪನನುಭವಿಸಿ ಮುಂಜಾನೆಯವರೆಗೂ ಅದೇ ಭಾವದಲಿ ತೋಯುವಾಸೆ..
ಸಂಭಂಧಗಳ ಹೊಸ ಹೊಸ ಚಿಗುರೆಲೆಗಳು ಅದೆಷ್ಟೇ ಮೂಡಿದರೂ ಮುಂದೊಂದು ದಿನ ಮುನಿಸಿನ ಬಿರುಗಾಳಿಗೋ ಅಥವಾ ಸಾವಿನೊಂದಿಗೋ ಉದುರಿ ಹೋಗುವುದದು; ನಾನೆನುವ ಮರವ ಎತ್ತರಕೆ ಬೆಳೆಸಿದ ಪರಮಾತ್ಮನೆನುವ ತಾಯಿ ಬೇರೊಂದೆ ನನಗನಿಸಿದಂತೆ ಶಾಶ್ವತವಾಗುಳಿಯುವುದು.
ಭರತ ಭೂಮಿಯ ವೀರ ಯೋಧರಿಗಿದೋ ನನ್ನ ನಮನ ಮಾಡಿದರಂದು ಒಳಬಂದ ಪಾಕ್ ಯೋಧರ ನಿರ್ನಾಮ ಹವನ ನೆರೆಯ ಧೂರ್ತ ನರಿಗಳ ಕುತಂತ್ರ ಯೋಜನೆಯ ಹನನ ಭೂರಿ ಭೋಜನವನಿತ್ತು ಸಂತಸಪಡಿಸಿದರು ಯಮನ ಕಳೆದುಕೊಂಡಿದ್ದ ಕಾರ್ಗಿಲಿನದಾಯಿತು ಭವ್ಯ ಪುನರಾಗಮನ ದುರ್ವಿಧಿ.. ಆಳುತಿಹ ಭೂಪರು ಕೊಡುತಿಲ್ಲ ಈ ಸಾಧನೆಯೆಡೆ ಗಮನ ಆದರೂ ಬೇಸರದಿ ಕುಗ್ಗದಿರು, ಕೆಚ್ಚೆದೆಯ ಓ ಜವಾನ ನಿಮ್ಮೀ ಯಶೋಗಾಥೆಯ ಹಾಡುವೆವು ನಾವ್ ಪ್ರತಿದಿನ ಈ ಹಾಡ ಹಾಡುತಲೇ ಕಳೆಯಲಿ ನಮ್ಮ ಜೀವನ