Saturday 29 March, 2014

ಜ್ಞಾನ



ಜ್ಞಾನವೂ
ಸಾಗರದಂತೆ...
ಅದರೆಡೆಗೆ
ಬರುವವರೆಲ್ಲರಿಗೂ
ಇನ್ನಿಲ್ಲದಷ್ಟು
ಉಣಬಡಿಸುವ
ಶಕ್ತಿ ಇದ್ದರೂ,
ಬರುವವನ
ಯೋಗ್ಯತೆಯ
ಬೊಗಸೆಯೊಳಗೆ
ಹಿಡಿಸುವಷ್ಟನ್ನೇ
ಬಿಟ್ಟುಕೊಡುತ್ತದೆ.

ನೆಮ್ಮದಿ..



ಅವಳ
ಮಂದಹಾಸದ
ನೋಟದ
ಗೂಟಕ್ಕೆ
ಕಟ್ಟಿಹಾಕಲ್ಪಟ್ಟಿರುವ
ಪ್ರೀತಿಯ
ಕನಸೆನುವ
ಹಸುವೊಂದು
ನನ್ನೆದೆಯಲಿ
ಹುಲುಸಾಗಿ
ಬೆಳೆದಿದ್ದ
ನೆಮ್ಮದಿಯ
ಮೇಯುತಿದೆ.

ಬಯಲು...



ರಾತ್ರಿ ಪೂರ್ತಿ
ಶರಧಿಯೊಳಗೆ
ಮುಳುಗಿದ್ದ
ನೇಸರ
ಹೇಗೆ ಅರಿತನೋ...?
ಮುಂಜಾನೆಯಲಿ
ಮೇಲೆದ್ದವನೇ
ಬೆಳಕ ರಹಸ್ಯವ
ಬಯಲು
ಮಾಡಿಬಿಟ್ಟ

ಚಪ್ಪಲಿ



ದೇವಳಕೆ
ಬರುವಾಗ
ಕಾಲಲಿದ್ದ
ಚಪ್ಪಲಿ..
ಒಳಹೊಕ್ಕು
ಪ್ರದಕ್ಷಿಣೆ
ಬರುವಾಗ
ಕಾಲಲ್ಲಿರಲಿಲ್ಲ.
ಅಲ್ಲಡ್ಡ ಬಿದ್ದು
ಹೊರಗೆ
ಬಂದದನು
ಕಾಣುವವರೆಗೂ..
ಅದು ಅವನ
"ತಲೆ"ಯಲಿತ್ತು.

ಶಿಶುಪಾಲ



ನಾವೆಲ್ಲರೂ
ಶಿಶುಪಾಲರೇ..
ತಪ್ಪುಗಳರಿವಿದ್ದೂ
ಒಂದರ ಮೇಲೊಂದು
ತಪ್ಪ ಮಾಡುತ್ತಲೇ
ಸಾಗುತ್ತೇವೆ..
ಸಾವಿನ ಶಿಕ್ಷೆ
ಸಿಗುವವರೆಗೆ;
ವ್ಯತ್ಯಾಸ ಎನುವುದೊಂದೇ,
ಅವನಿಗೆಷ್ಟು ತಪ್ಪಿನ
ಕ್ಷಮೆ ಎನುವುದು
ಗೊತ್ತಿತ್ತು...
ಅದರರಿವಿಲ್ಲದೆ
ತಪ್ಪು ಮಾಡುತಿರಬೇಕು
ನಾವು ಸಾಯುವವರೆಗೆ.

ಒದ್ದಾಟ...


ಅವರೇನೋ
ತಾಯಿ ಭಾರತಿಯ
ಪಾದಗಳಲೊಂದಾಗ
ಹೊರಟಿಹೆವೆಂದು
ನಗುನಗುತ್ತಲೇ
ಇದ್ದರಂತೆ...
ಇಂತವರ ಉಸಿರ
ಕಸಿಯಬೇಕೆನುವ
ಒದ್ದಾಟವೆಲ್ಲಾ
ಆ ನೇಣುಗಂಬ
ಮತ್ತು ಕುಣಿಕೆಗೆ..
ಮತ್ತಾ ಕುಣಿಕೆಯೆ
ಬಿಗಿದವನಿಗೆ...

(ಅ)ಸಹಕಾರ



ಅಸಹಕಾರ
ಚಳುವಳಿಯ
ರೂವಾರಿ
"ತಾತ"ನಿಗೇಕೋ
ಭಗತ, ರಾಜಗುರು
ಸುಖದೇವರ
ನೇಣು ಕುಣಿಕೆಯ
ಸಿದ್ಧಗೊಳಿಸುವಾಗ..
ಬಿಳಿಯರಿಗೆ
ಸಹಕರಿಸುವ
ಮನಸಾಯಿತು...

ಜೀವನ...


ನಿಲ್ಲುವ ಹಾಗಿಲ್ಲ
ಕ್ಷಣ ಕ್ಷಣಕೂ...
ಮುಂದಡಿ ಇಡಲೇಬೇಕು.
ಇಡುವ ಪಾದದಡಿಯಲಿ
ಸುಖವೆನುವ ಹೂವಿದೆಯೋ
ದುಃಖವೆನುವ ಮುಳ್ಳಿದೆಯೋ
ಯಾರಿಗೆ ಗೊತ್ತು...?
ಸಾವಿನ ನಿಲ್ದಾಣ
ಸಿಗುವವರೆಗೂ
ತುಳಿದು ಹೂವ ನಗುತಲೋ
ಅಥವ ಮುಳ್ಳಿನ ಮೇಲಿಟ್ಟ
ಕಾಲನು ಕುಂಟುತಲೋ
ಸಾಗಲೇಬೇಕು...
ನಿಲ್ಲುವ ಹಾಗಿಲ್ಲ...
ಕ್ಷಣ ಕ್ಷಣಕೂ
ಮುಂದಡಿ ಇಡಲೇಬೇಕು.

ತದ್ರೂಪು...



ಉದುರಿದ
ಪ್ರತಿ ಕಣ್ಣೀರ
ಹನಿಯಲ್ಲೂ,
ಅವಳ ಪ್ರತಿಬಿಂಬವೇ
ಕಾಣಿಸಿದಾಗ...
ಮನ ಹೇಳಿತು,
"ನೀ, ನಿನ್ನ ಹುಟ್ಟಿಗೆ
ಕಾರಣಳಾದವಳದೇ
ತದ್ರೂಪು..."

ಅರೇಂಜ್...



ನಮ್ಮದು "ಲವ್ ಮ್ಯಾರೇಜು..."
" ಅರೇಂಜ್ಡ್ " ಅಲ್ಲ
ಎಂದು ಅಭಿಮಾನದಲಿ
ಬೀಗುತ್ತಿದ್ದನ ಕಂಡಾಗ...
ಅವರಿಬ್ಬರ ಸಂಬಂಧವ
ಅರೇಂಜ್ ಮಾಡಿದ
ಭಗವಂತನಿಗೆ ನಗುವನ್ನು
ತಡೆದುಕೊಳ್ಳಲಾಗಲಿಲ್ಲವಂತೆ

ಕೆಳಮಟ್ಟ...



ನನ್ನನ್ನಿಷ್ಟು
ಕೆಳಮಟ್ಟಕ್ಕೆ
ಇಳಿಸಿಬಿಡುವಿರಿ
ಎಂದು
ಕನಸಲ್ಲೂ
ಎನಿಸಿರಲಿಲ್ಲ
ಓ ಆಧುನಿಕ
ಯುವಕರೇ...
ಎಂದು
ಅಳುತ್ತಿದೆಯಂತೆ
.
.
.
.
.
.
.
.
ಪ್ಯಾಂಟಿನ ಸೊಂಟ

ಹ್ಯಾಪಿ (???) ಹೋಳಿ..



" ಹ್ಯಾಪಿ "ಯಾಗಲೇ ಇಲ್ಲ
ಆಕೆ ಮುಟ್ಟಿ ಹಚ್ಚಿದರೂ
ನನ್ನ ಕೆನ್ನೆಗೆ ಚೆಲುವಿನ ಬಣ್ಣ ;
ಕಾರಣ; ಹಚ್ಚಿದವಳೇ
ನಗುತ್ತಾ ಹೇಳಿದ ಮಾತು
ಹ್ಯಾಪಿ ಹೋಳಿ " ಅಣ್ಣ "

ಪಿಚಕಾರಿ



ಬಣ್ಣ ಹಚ್ಚುವ
ನೆಪದಲ್ಲಾದರೂ
ನನ್ನ ಕೆನ್ನೆ
ಸವರಿಯಾಳು
ಎನುವ ನನ್ನಾಸೆಯ
ಭಂಗಗೊಳಿಸಿತ್ತು
ಅವಳ ಕೈಯಲ್ಲಿದ್ದ
ಪಿಚಕಾರಿ

ಬಣ್ಣ



ಈ ದಿನ
ಯಾವುದಾದರೊಂದು
ಬಣ್ಣವಾಗಿ ಬಿಡುವಾಸೆ;
ಅವಳ ಕೆನ್ನೆಯಲಿ
ಅಳಿಸಿ ಹೋಗದಂತೆ
ನೆಲೆ ನಿಲ್ಲುವ
ಸುಂದರ ಅವಕಾಶದ
ಸದುಪಯೋಗಕ್ಕಾಗಿ..

ಸಂಜೆ...



ಸಂಜೆಯಾದರೆ ಸಾಕು,
ಸದಾ ಅಭಿಮಾನಿಗಳಿಂದ
ಸುತ್ತುವರಿಯಲ್ಪಟ್ಟಿರುವ
ದೊಡ್ಡ ಸ್ಟಾರ್
ನಾನಾದಂತಹಾ ಅನುಭವ
.
.
.
.
.
.
.
.
.
.
ಆ ರೀತಿ ಮುತ್ತಿಕ್ಕುತ್ತವೆ
ಈ ಹಾಳು ಸೊಳ್ಳೆಗಳು.

ಹುಟ್ಟಿ ಬರಬೇಡ.....


ಹುಟ್ಟಿ ಬರಬೇಕು ನೀ
ಮತ್ತೆ ಈ ನೆಲದ ಮೇಲೆ
ಭರತ ಮಾತೆಯ ರಕ್ಷಣೆಗೆ.
ಮನದ ಈ ಬಯಕೆಯ
ಬೆನ್ನಲ್ಲೇ ಕರಾಳ ಸತ್ಯದರ್ಶನ;
ಬೇಡ ಬರಬೇಡ...
ಮತ್ತದೇ ಧನದಾಹಿ ಮಾಧ್ಯಮದ
ಹಾಳು ಕೆಮರಾ ಕಣ್ಣುಗಳು
ನಿನ್ನ ತೋರಿಸಿ ಕೊಟ್ಟಾವು
ಶತ್ರು ಪಾಳಯಕೆ....
ಅವುಗಳ ಧನದಾಹಕ್ಕೆ
ಸುಮ್ಮನೆ ನೀ ನೆತ್ತರ ಹರಿಸಬೇಡ
ಉಸಿರ ನಿಲಿಸಬೇಡ...
ಹುಟ್ಟಿ ಬರಬೇಡ... ನೀ
ಮತ್ತೆ ಹುಟ್ಟಿ ಬರಬೇಡ.

---ಕೆ.ಗುರುಪ್ರಸಾದ್
ಸಂದೀಪ್ ಉನ್ನಿಕೃಷ್ಣನ್ ನಂತಹ ವೀರತ್ವ ನಮ್ಮಲ್ಲೇ ಹುಟ್ಟಲಿ... ಒಂದು ಸಣ್ಣ ನುಡಿನಮನ ಆ ದಿವ್ಯ ಚೇತನದ ಜನುಮ ದಿನದಂದು... ಅಂತೆಯೇ ಆ ದೇಶದ್ರೋಹಿ ಮಾದ್ಯಮಗಳಿಗೊಂದು ಧಿಕ್ಕಾರ...

ಭಯ



ಒಂಟಿತನದ ಸುಖಕಂಟಿ
ಕಾಲವ ಕಳೆಯುತಿದ್ದವನಿಗೀಗ
ತನ್ನರ್ಧವ ಧಾರೆಯೆರೆದು
ಅವಳರ್ಧವ ತಾ ಪಡೆದು
ಜಂಟಿಯಾಗುವುದೆಂದರೆ
ಅದೇನೋ ಹೇಳಲಾಗದ ಭಯ

ಗುಣಗಾನ....



ಹಾಳಾದ್ದು...
ಪಕ್ಷ ಪ್ರಚಾರಕ್ಕೆ
ಹೋಗಲೇ ಬಾರದಿತ್ತು.
.
.
.
.
.
.
.
.
.
ನಿನ್ನದೇ ಗುಣಗಾನ
ಮಾಡುವೆ
ಎಷ್ಟು ಕೊಡುತ್ತೀ...?
ಎಂದು ಕೇಳಿ ಬಿಟ್ಟೆ
ಅಭ್ಯಾಸ ಬಲದಿಂದ,
ನನ್ನವಳ ಬಳಿ.

ಸಿಂಹಾಸನಾಧೀಶ್ವರಿ...



ಗಾಯನಕೆ ಎಂದೆಂದಿಗೂ
ತಾನೇ ಎನುವ
ಕೋಗಿಲೆಯಂಹಕಾರವ,
ಸಣ್ಣ ಆಲಾಪದಲೇ
ಮುರಿದು ಹಾಕಿದ
ನೂತನ ಗಾಯನ
ಸಿಂಹಾಸನಾಧೀಶ್ವರಿಗೆ
ನನ್ನ ಮನದಾಳದ
ಶುಭ ಹಾರೈಕೆ...

ಹೆಮ್ಮೆ...???



ನಲವತ್ತೊಂಭತ್ತು
ದಿನದಲ್ಲಿ ಮಾಡಿದ
ಸಾಧನೆಯ ಬಗೆಗೆ
ಕೇಜ್ರೀವಾಲರಿಗೆ
ಇದೆಯಂತೆ ಹೆಮ್ಮೆ;
ಆದರಲ್ಲಿನ ಜನ
ಹೇಳುತ್ತಾರೆ...
ನೋಡಲು ಸಿಕ್ಕಿದ್ದು
ಆಡಳಿತದವರದೇ ಧರಣಿ,
ಮತ್ತು ಕೇಳಿಸಿದ್ದು
ಬರೀ ಇವನ ಕೆಮ್ಮೇ...

ಲವಲವಿಕೆ


ಸೂರ್ಯನ
ಆಗಮನವನೆದ್ದು
ಕಣ್ತುಂಬಿಕೊಳುವವರಿಗೆಲ್ಲಾ
ಸೂರ್ಯನುಡುಗೊರೆ
ದಿನ ಪೂರ್ತಿಯ
ಲವಲವಿಕೆ

ಕರ್ಣ



ದಾನವ ಮಾಡಿ
ಮಹಾದಾನಿ
ಎಂದೆನಿಸಿಕೊಳುವ
ತುಡಿತಕೆ
ಬದಲಾಗಿ;
ನಿನ್ನೊಳಗಿನ
ಕೆಟ್ಟತನವ
ದಾನ ಮಾಡಿದಿದ್ದರೆ
ನರೋತ್ತಮ
ಆಗಿರುತ್ತಿದ್ದೆ.

ಗೌರವ



ನಾನಾಗಿ
ಕೊಡುವುದಕ್ಕಿಂತ
ತನ್ನ ಸಂಸ್ಕಾರದ
ತೇಜಸ್ಸಿನಿಂದ
ಗೌರವವ ನನ್ನಿಂದ
ಕಸಿಯುವವಳಾಗಲಿ
ಈಗಿನ ಹೆಣ್ಣು
ಎನುವುದೇ
ನನ್ನ ಮನದಾಸೆ..

ಸಮಾಜಕ್ಕೊಂದು ಪ್ರಶ್ನೆ...



ದೌರ್ಜನ್ಯದ ಕತ್ತಲೆಯಲೇ
ಇನ್ನೆಷ್ಟು ಸಮಯ ಕಳೆಯಲಿ..
ನನ್ನ ಬಾಳಿಗೂ ಸುರಕ್ಷತೆಯ
ಬೆಳಕ ಚೆಲ್ಲಲಾರಿರಾ...?
ಈ ಪುಟ್ಟ ದೀಪಗಳಂತೆ
ಭಯದ ತಮವನೊದ್ದೋಡಿಸಿ
ನನ್ನೀ ಮುಖದಿ ಚೆಲುವ
ನಗುವ ಮೂಡಿಸಲಾರಿರಾ...?

ಇಷ್ಟವಾಗದ ಪ್ರೇಮ ಕಥೆ...



ಕತ್ತಲಾದಂತೆ ಕಣ್
ರೆಪ್ಪೆಯೊಳ ಬದಿಯ
ತೆರೆಯ ಮೇಲೆ
ನನ್ನ ಪ್ರೇಮದ ಕಥೆ
ಪ್ರಾಸರವಾಗುತ್ತದೆ.
ಎಲ್ಲರಿಗೂ
ಇಷ್ಟವಾಗಲೇ ಬೇಕು
ಅಂತೇನಿಲ್ಲವಲ್ಲ...
ಹಾಗಾಗಿ ಒಂದಷ್ಟು
ಕಣ್ಣೀರ ಹನಿಗಳು
ಬೇಸತ್ತು ಹೊರಬರುತ್ತದೆ.

Thursday 6 March, 2014

ಗೀಚಿ ಗೀಚಿ....



ಮುಸ್ಸಂಜೆಯ
ಏಕಾಂತದಲಿ
ಅವಳ ನೆನಪಿಸಿಕೊಂಡು
ಹಾಳೆಯ
ತುಂಬೆಲ್ಲಾ
ಗೀಚಿ ಗೀಚಿ
.
.
.
.
.
.
.
.
.
.
ಶಾಯಿ ಖಾಲಿ
ಮಾಡಿ ಬಿಟ್ಟೆ.

ಪಾಕ ಪ್ರವೀಣೆ..



ಪತ್ನಿಯಾಗಿ ನಿನ್ನ ಕೈತುತ್ತು
ತಿನದೇ ನಾ ಸಾಯಲಾರೆ,
ಎಂದು ನುಡಿಯುತಿದ್ದ
ಮಹಾನ್ ಪ್ರೇಮಿಯೊಬ್ಬ ;
ಪತ್ನಿಯಾಗಿ ಆಕೆ
ಮಾಡಿ ಮೊದಲುಣಿಸಿದ
ಕೈ ತುತ್ತು ತಿಂದವನೇ
ಅರ್ಧ ಸತ್ತು ಬಿಟ್ಟಿದ್ದ.

ಬೇಸರ



ಅವಳು ನನ್ನ
ನೋಡದೇ
ಇದ್ದದ್ದಕ್ಕಾದ
ಬೇಸರ
ಕರಗಿ ಹೋದೀತು.
ಆದರೆ
ಬದಿಯವನನ್ನ
ಮತ್ತೆ ಮತ್ತೆ
ನೋಡಿದಳಲ್ಲ
ಅದಕ್ಕಾದ
ಮತ್ಸರಕ್ಕೇನು
ಮಾಡೋಣ...?

ತರ-ಕಾರಿ



ಕೂಗೋ ಹಾಗಿಲ್ಲವಂತೆ
ಇನ್ನುಮುಂದೆ
ಬೀದಿ ಬೀದಿಯಲಿ
ತರಕಾರಿ ತರಕಾರಿ...
ಸರ್ಕಾರ ಹೇಳುತ್ತೆ
ಏನಿದ್ದರೂ ನೀವು
ರಾತ್ರಿ ಒಂದು
ಗಂಟೆಯವರೆಗೂ
ಕಂಠ ಪೂರ್ತಿ ಕುಡಿದು
ಬೀದಿಯಲಿ ಕಾರಿ.

ಉಗುಳು...


ಉಗುಳ
ನುಂಗಿಕೊಂಡೆ
ಕಂಡೊಡನೆ
ಅವಳ ಚೆಲುವೇss
ಅಂಥಾದ್ದು....
ನುಂಗಿಕೊಳದೇ
ಉಗಿದೇ ಬಿಟ್ಟಳು,
ಕಂಡೊಡನೆ
ನನ್ನ ಚೆಲುವೇ
ಇಂಥಾದ್ದು.

ವಿರಹ



ಕೈ ಕೊಡವಿ
ನನ್ನನಲ್ಲೇ ಬಿಟ್ಟು
ಹೋಗಿದ್ದರೂ
ಚಿಂತೆ ಇರಲಿಲ್ಲ
ವಿರಹದ ಪ್ರಪಾತಕ್ಕೆ
ದೂಡಿ ಬಿಡುವ
ಅಗತ್ಯವೇನಿತ್ತು...?

ತೇರನೆಳೆಯಬೇಕು...



ತೇರನೆಳೆಯಬೇಕು....
ಉತ್ಸವದ ತೇರನೆಳೆಯಬೇಕು...
ಊರೊಡೆಯನ ಚೆಂದದ ತೇರನೆಳಯಬೇಕು...
ವರುಷ ಪೂರ್ತಿ ಗರ್ಭಗುಡಿಯೊಳಗಿರುವ
ದೇವನಿಗೆ ವರ್ಷಕೊಮ್ಮೆ ಬೀದಿಗಿಳಿಯುವಾಸೆ...
ಆ ಅಸೆಯ ಪೂರೈಸೆ ಭಕ್ತವೃಂದ
ಸಿಂಗರಿಸಿರುವ ದೊಡ್ಡ ತೇರನೆಳಯಬೇಕು...
ಉತ್ಸವದ ತೇರನೆಳೆಯಬೇಕು...

ತುದಿಯಲಿಹ ಕಲಶದ ಹೊಳಪ ನೋಡುತ
ಬಣ್ಣ ಬಣ್ಣದ ಬಾವುಟದ ಚೆಲುವ ಕಾಣುತ
ಗಜರಾಜನ ಕರ್ಣದಂತಿಹ ಅಕ್ಕ ಪಕ್ಕದೆರಡು
ದೊಡ್ಡ ದೊಡ್ಡ ಬಾವುಟಕೆ ಮನವ ಸೋಲುತಾ
ತೇರನೆಳೆಯಬೇಕು.....
ಉತ್ಸವದ ತೇರನೆಳೆಯಬೇಕು....

ನಡುವೆ ಪೀಠದಲಿ ರಾಜಾರೋಷದಿ ಕುಳಿತಿಹ
ಮಹಾಲಿಂಗೇಶ್ವರಗೆ ಜಯ ಘೋಷವ ಹಾಕುತ
ರಥವನನತಿ ದೂರದಿ ನಿಲಿಸಿ ಸುಡುಮದ್ದ ಸಿಡಿಸುತಾ
ವರುಷಕೊಮ್ಮೆ ಹೊರ ಬರುವ ದೇವನ
ಮನಕಾನಂದ ನೀಡಬೇಕು....
ತೇರನೆಳೆಯಬೇಕು....
ಉತ್ಸವದ ತೇರನೆಳೆಯಬೇಕು....

ಕೆಟ್ಟ ಕೋಪ



ಗೆಳತೀ...
ನಿನ್ನ ಸಿಹಿಕನಸಿನ
ತಂಗಾಳಿಯಲೆ
ಮೈ ಮರೆವೆನು ನಾ..
ಅಂದಾಗಲೆಲ್ಲಾ
.
.
.
.
.
.
ತಲೆಯ ಮೇಲೆ
ಗಿರಗಿರನೆ ಬಿಡದೆ
ಸುತ್ತುವ ಫ್ಯಾನಿಗೆ
ಕೆಟ್ಟ ಕೋಪ
ಬರುತ್ತದೆ.

ಮಹಾಭಾರತ



ಚಿಕ್ಕವನಾಗಿದ್ದಾಗ ಬರಿಯ
ಕಣ್ಣಿಗೆ ಹಬ್ಬವಾಗಿದ್ದ
ದೃಶ್ಯ ಕಾವ್ಯವಿಂದು,
ಧರ್ಮ ಸೂಕ್ಶ್ಮತೆಯ
ಅರಿವಿನ ಹಸಿವಿನಲಿರೋ
ನನ್ನ ಸಣ್ಣ ಮೆದುಳಿಗೆ
ಭೂರಿ ಭೋಜನವ
ತಡೆಯಿಲ್ಲದೆ ನೀಡುತಿದೆ.

ನನಸು...



ಬುವಿಯ ಜೀವಕೋಟಿಗಳು
ಕಂಡ ಲೆಕ್ಕವಿರದಷ್ಟು
ಕನಸುಗಳು....
ಕನಸುಗಳಾಗೇ
ಉಳಿದು ಹೋದರೂ..
ಅರಳುವ ಕನಸ
ಕಂಡ ಮೊಗ್ಗುಗಳ
ಕನಸು ಮಾತ್ರ
ಸೂರ್ಯೋದಯದೊಂದಿಗೇ
ನನಸಾಯಿತು.

ಹಿಡಿಶಾಪ


ಕಹಿ ಔಷಧಿ ಕೊಟ್ಟ
ವೈದ್ಯನಿಗೆ
ಕೃತಜ್ಞತೆಯಲೇ
ಹಣವ ಕೊಟ್ಟು
ಬರುವ ಜನಗಳು..
ಸುಖಗಳ ನಡುವೆ
ಭಗವಂತನೆಂದಾದರೂ
ನೋವ ನಿತ್ತರೆ...
ಹಿಡಿಶಾಪವ ಹಾಕುವುದ
ನಿಲ್ಲಿಸುವುದೇ ಇಲ್ಲ.

ಉಡುಗೊರೆ...



ಪ್ರತಿಯೊಂದು ದಿನ
ಎನುವುದದು
ಸುಖ , ದುಃಖ
ಮತ್ತೊಂದಿಷ್ಟು
ಕೌತುಕಗಳಿಂದಾದ
ಭಗವಂತನುಡುಗೊರೆ.
ನಾವುಗಳೆಂಬ
ನಿದಿರೆಯ
ಗರ್ಭದಿಂದ
ಜನುಮ ಪಡೆದ
ಕೂಸುಗಳಿಗೆ,

ಮೋಸ



ಅವಳ ಮೋಸದಿಂದಾಗಿ
ಒಡೆದ ನನ್ನ ಹೃದಯದಿಂದ
ಒತ್ತರಿಸಿ ಬರುತಿದ್ದ
ವಿರಹದ ಸಾಲುಗಳನು...
ಪೂರ್ತಿ ಕವನವಾಗದಂತೆ
ತಡೆ ಹಿಡಿದಿದ್ದು....
.
.
.
.
.
.
.
ಕಣ್ಣೆದುರು ಹಾದು ಹೋದ
ಹೊಸ ಹುಡುಗಿ.

ಹೇಳಲಾಗದ ಪ್ರೀತಿ...



ಎಲ್ಲರಲೂ
ಅಂತಲ್ಲ...
ಹೆಚ್ಚಿನವರ
ಮನದ
ಮನೆಯಲೊಂದು
ಕತ್ತಲ
ಕೋಣೆಯಿರುತ್ತದೆ.
ಅಲ್ಲೇ...
ಹೇಳಲಾಗದೇ
ಬಾಡಿ ಒಣಗಿ
ಹೋದ
ಒಂದು ಪ್ರೀತಿ
ಹೂವಿರುತ್ತದೆ.

ಮರೆವು



ತಾನೆನಿಸಿದಂತೆ
ನಾವು
ನಡೆದುಕೊಳಲು
ಭಗವಂತ
ನಮ್ಮ ಮೇಲೆ
ಮಾಡುವ
ಸಮ್ಮೋಹನ ಕ್ರಿಯೆ
ಈ ಮರೆವು.

ಜಲಕ್ರೀಡೆ



ತಡೆಹಿಡಿದಿರುವ
ನನ್ನ ಕಣ್ಣೀರ
ಕೊಳದಲಿ
ತಡೆಯಿಲ್ಲದೆ
ಸಾಗಿದೆ
ಅವಳ ನೆನಪುಗಳ
ಜಲಕ್ರೀಡೆ

ಅಂಕುಶ



ಹಸಿವಿನ ಪರಿವೆಯೇ
ಇಲ್ಲವಾಗಿಸುವ ಹಾಗೆ
ನನ್ನ ಪ್ರೀತಿಸು ಗೆಳತಿ..
.
.
.
.
.
.
ಪ್ರಗತಿಯಲ್ಲಿರೋ
ಸಣ್ಣ ಬೊಜ್ಜಿಗೆ
ಅಂಕುಶ ಹಾಕಬೇಕಾಗಿದೆ.

ರಣಹದ್ದು


ಕುಕ್ಕಿ ಕುಕ್ಕಿ ತಿನಲು
ಕಾದು ಕುಳಿತಿವೆ
ಅವಳ ನೆನಪೆನುವ
ರಣಹದ್ದುಗಳು ;
ಏಕಾಂತವೆನುವ
ಬರಡುಭೂಮಿಗೆ
ಅದಾವ ಘಳಿಗೆಯಲಿ
ಕಾಲಿಡುವನೋ ಎಂದು.

ತೆರಿಗೆ...



ಹಣಕಾಸು ಸಚಿವರ
ಫರ್ಮಾನು...
ರ್ಯಾಲಿ ಟಿಕೆಟಿನ
ಹಣಕ್ಕೆ ಕಟ್ಟಬೇಕಂತೆ ತೆರಿಗೆ ;
ಕಟ್ಟೋಣವಂತೆ ಅದಕ್ಕೇನು...?
ಆದರೆ ಆ ಹಣವ ಪಡೆದು
ಕಳುಹಿಸಿ ಕೊಡುವಿರಾ
ನಿಮ್ಮ ಇಟಲಿಯಮ್ಮನನ್ನು
ಆಮೇಲೆ ಅವಳ ತವರಿಗೆ...?

ಮೇಲು....



ತನ್ನ ಶೀಲವನು
ಕಪಟ ಪ್ರೇಮಧಾರೆಯೆರೆವ
ತನ್ನಿನಿಯ ಕೊಟ್ಟ
ಬರಿಯ ಉಡುಗೊರೆಯ
ಬೆಲೆಗೆ ಮಾರಿಕೊಂಡವಳಿಗಿಂತ
ವಿಧಿಯಾಟಕೆ ಬಲಿಯಾಗಿ
ತನ್ನ ಹಸಿವನಾರಿಸುವ
ಸಲುವಾಗಿ
ಕಾಮುಕರಿಗೆ ಒಡಲಿನೂಟವ
ಬಡಿಸುವ ವೇಶ್ಯೆಯೇ ಮೇಲು.

ಒದ್ದಾಟ



ಅವಳು
ಸಿಗದೆ
ಹೋದಾಗಿನ
ಒದ್ದಾಟಕ್ಕಿಂತಲೂ
ಮಿಗಿಲಾದದ್ದು...
ಈ ಪದಗಳು
ಸಿಗದಾಗಿನ
ಒದ್ದಾಟ

ಪ್ರೀತಿ....



ಪ್ರೀತಿಸುವವರ
ಒಂದು ದಿನದ
ಹುಚ್ಚಾಟಕ್ಕಷ್ಟೇ
ನನ್ನ ವಿರೋಧ...
ನೈಜ ಪ್ರೀತಿಗಲ್ಲ;
ನನಗಿನ್ನೂ ದಕ್ಕಿಲ್ಲ
ಅನ್ನುವುದಕ್ಕಾಗಿ
ಆಕ್ರೋಶಕೆ ಹುಟ್ಟಿದ
ವಿರೋಧವಲ್ಲ;
ಒಂದು ದಿನದ
ಪ್ರೀತಿಯ ದಕ್ಕಿಸಿಕೊಳ್ಳುವ
ಮನಸೇ ನನಗಿಲ್ಲ;
ಅದಕಾಗೇ ಒಟ್ಟುಗೂಡಿಸಿ
ತೆಗೆದಿಡುತ್ತಿದ್ದೇನೆ
ನನ್ನೆಲ್ಲಾ ಪ್ರೀತಿಯ,
ಏಳು ಜನ್ಮಗಳ
ಪ್ರತಿನಿಧಿಸುವ
ಏಳು ಹೆಜ್ಜೆಗಳ
ನನ್ನ ಜೊತೆಗಿಡುವವಳ
ಮೇಲೆ ಸುರಿಸಬೇಕಲ್ಲ.

ನೋವು



ಅವಳಂದಳು....
ನನ್ನ ಕಣ್ಣೊಳಗಿನ
ನೋವ ನೋಡಿಯೂ
ನೋಡದಂತೆ
ಮುಖ ತಿರುಗಿಸಿದೆಯಲ್ಲಾ
ಇದೇನಾ ನೀ
ನನ್ನಲ್ಲಿಟ್ಟ ಪ್ರೀತಿ...?
.
.
.
.
.
.
ನಾನಂದೆ....
ಪ್ರೀತಿ ಮನೆ ಹಾಳಾಗ...
ಅದು " ಮೆಡ್ರಾಸ್ ಐ"
ಮಾರಾಯ್ತೀ...

ಹ(ಹೆ)ಗಲು



ರವಿ ಬಂದು
ಕರಗಿ ಕತ್ತಲು
ಆಗಿದೆ ಹಗಲು;
ಸಜ್ಜಾಯಿತು..
ಸಂಸಾರದ
ನೊಗವ ಹೊರಲು
ನಮ್ಮೀ ಹೆಗಲು.

ಗಿಫ್ಟ್



ಮುಸ್ಸಂಜೆಗೆ
ನಾನೊಂಟಿಯಾಗಿರುವಾಗ
ಕೆನ್ನೆಯ ಕಚ್ಚಿ
ಕಾಡಲೇ ಎಂದರೆ
ನನಗೇನೂ ಬೇಸರವಿಲ್ಲ
ಆದರೆ
.
.
.
.
.
.
.
.
.
.
.
.
.
.
.
.
ಮಲೇರಿಯಾದ
ಗಿಫ್ಟ್ ಮಾತ್ರ
ಕೊಡಬೇಡ

ಬಂಧಿಗಳು...



ಮಾಯಾವಾಗುತಿದೆ
ಸಮವಸ್ತ್ರವ ಧರಿಸಿ
ಬೆನ್ನಿನ ಮೇಲೆ
ಬ್ಯಾಗನೇರಿಸಿ
ಗುಂಪಾಗಿ ಓಡೋಡಿ,
ರಸ್ತೆ ಬದಿಯಲಿ ಕುಣಿದಾಡಿ
ನಗೆಯ ಚೆಲ್ಲಿ ಸಾಗುವ
ಚಿಣ್ಣರ ಸಾಲುಗಳು..
ಈಗ ಅವರೆಲ್ಲರೂ
ಸ್ಕೂಲ್ ವ್ಯಾನೆನುವ
ಹಳದಿ ಬಣ್ಣದ
ಚಲಿಸುವ ಜೈಲಿನ ಬಂಧಿಗಳು....

ಸೂರ್ಯೋದಯ



ಮನದ ಬುವಿಯಲ್ಲಿ
ಪದಗಳ ಕಡಲೊಂದಿದ್ದರೆ
ನಿತ್ಯವೂ ಕವಿತೆಯ
ಸೂರ್ಯೋದಯ
ಆಗಿರುತಿತ್ತೇನೋ...
ಆದರೆ ನನ್ನಳೊಗಿರುವುದು
ಬರಿಯ ಸಣ್ಣ ಕೊಳ.

ವಾ(ನಾ)ಪಾಸು...



ಮುಖ ತಿರುಗಿಸಿ
ಆಕೆ ವಾಪಾಸು
ಹೋದಾಗಲೇ
ಗೊತ್ತಾದದ್ದು...
ನಾನು ಪ್ರೇಮದಲಿ
ನಾಪಾಸೆಂದು.

ಹುಡುಕಾಟ...


ಗೆಳತೀ...
ನೇರವಾಗಿ
ದಿಟ್ಟಿಸಿ ನಿನ್ನನ್ನೇ
ನೋಡಲು
ಧೈರ್ಯ ಸಾಲದೆ,
ಅತ್ತಿತ್ತ ನಿನ್ನ ಸುತ್ತ
ಇಲ್ಲದ ವಸ್ತುಗಳ
ಹುಡುಕಾಟಕ್ಕೆ
ತೊಡಗಿಸಿಕೊಳ್ಳುತ್ತದೆ
ನನ್ನ ಕಂಗಳು.

ಪ್ರಶ್ನೆ....?



ಮುಂಜಾನೆ ಮನದಲ್ಲಿ
ಮೂಡಿದ ಪ್ರಶ್ನೆ....?
ಸೂರ್ಯ ಕತ್ತಲ
ಸರಿಸುವವನೋ...?
ಅಥವಾ ಬೆಳಕ
ಸುರಿಸುವವನೋ...?

ಅರಳು...



ಮೊಗ್ಗಾಗಿ ದಳಗಳೆಲ್ಲಾ
ತೋರ್ಪಡಿಸಿದೊಗ್ಗಟ್ಟ
ಮೆಲ್ಲಗೆ ಮುರಿದು,
ಮೂಲದಲಷ್ಟೇ ಒಂದಾಗಿರಿ
ಎಂದುಸುರಿ
ಸ್ವಚ್ಛಂದ ಸ್ವಾತಂತ್ರ್ಯದಾಸೆಯ
ದಳಗಳೊಳಗೆ ಬಿತ್ತಿದ್ದು...
ಕಡಲ ಬಂಧನವ
ಕೊಡವಿ ಬಂದ ನೇಸರ.

ಸಕಾರಾತ್ಮಕ...



ಮೋಸ ಮಾಡಿದಾಕೆಗಾಗಿ
ಅಳುವ ಕಂಗಳಿಗಿಂತಲೂ
ಅದನಲ್ಲೇ ಮರೆತು
ಹೊಸಬಳೆಡೆ ಹೊರಳೋ
ಕಂಗಳು ನನ್ನದಾಗಲಿ.
ಎನುವುದೇ ಸಕಾರಾತ್ಮಕವಾಗಿ
ಯೋಚಿಸುವವನ ಆಸೆಯಂತೆ.

ಇಂಧನ...



ಹಾಳೆಯ ಮೇಲೆ
ಓಡಾಡುವುದಕೆ,
ನನ್ನ ಬಳಪ
ಬಯಸೋ ಇಂಧನ;
ನನ್ನವಳ ನೆನಪು

ಕುರುಹು...


ನನ್ನ ಬಾಳೆಂಬ
ತಾವರೆಯ ಎಲೆಯಲಿ,
ಅವಳೆಂಬ ನೀರ ಹನಿ
ಅತ್ತಿತ್ತ ಉರುಳಾಡಿ,
ಪ್ರೀತಿಯ ಕಚಗುಳಿಯನಿಟ್ಟು,
ಜಾರಿ ಇನ್ನೊಂದೆಲೆಯ
ನಡುವಲಿ ನೆಲೆಯಾದಾಗ,
ನನ್ನೊಡಲ ನಾ
ಒಮ್ಮೆ ನೋಡಿಕೊಂಡೆ.
ಅವಳು ಸುಳಿದಾಡಿದ
ಕುರುಹೇ ಇದ್ದಿರಲಿಲ್ಲ.

ಸತಾಯಿಸು....



ಮನದ ಮನೆಗೆ
ಬೇಗನೆ ಬಾರದೆ
ಸತಾಯಿಸುವವಳು,
ಬಂದು ಇನ್ನೆಷ್ಟು
ಸತಾಯಿಸಿಯಾಳೋ...
ಅನ್ನೋ ಸಣ್ಣ ಭಯ.

ಬುದ್ಧಿ ಮತ್ತೆ....



ನನ್ನವಳ ಬುದ್ಧಿಮತ್ತೆಯನು
ಕಂಡು ತಲೆದೂಗಲೋ....
ತಲೆ ಚಚ್ಚಿಕೊಳಲೋ...
ಅರ್ಥವಾಗುತ್ತಿಲ್ಲ.
ಕರ್ರಾಗಾದ ಪಾತ್ರೆಯನು
ತೊಳೆದು "ಬೆಳ್ಳಗಾಗಿಸಲು"
"ಫೇರ್ ಆಂಡ್ ಲವ್ಲೀ "
ಬಳಸಲೇ....
ಅನ್ನುತ್ತಿದ್ದಾಳೆ...
ನಾನೇನು ಮಾಡಲಿ....?

ಹುಣ್ಣಿಮೆ



ಪ್ರತಿ ದಿನದ
ಕತ್ತಲೂ
ನನ್ನ ಪಾಲಿಗೆ
ಹುಣ್ಣಿಮೆಯೇ...
ಅವಳ ಕನಸಿನ
ಬೆಳದಿಂಗಳೇ
ಇದಕೆ ಸಾಕ್ಷಿ.

ಅವಳಂತೆ...



ಪದಗಳೂ
ಅವಳಂತೆ
ವರ್ತಿಸುತಿದೆ,
ನನ್ನ
ಕಂಡೊಡನೆ
ದೂರ
ಸರಿಯುತಿದೆ.

ಹುತಾತ್ಮ...



ಗುಂಡನೆದೆಯಲಿ ನುಂಗಿ
ಹುತಾತ್ಮ ಪಟ್ಟವ
ಹೊತ್ತು ಬೀಗುತ್ತಾ
ಮೃತ್ಯು ಲೋಕವ
ಸೇರಿದ ಬಾಪೂವಿಗೆ
ಶಹೀದ್ ಭಗತರನು
ಕಣ್ಣಲ್ಲಿ ಕಣ್ಣಿಟ್ಟು
ನೋಡಲಾಗಲೇ
ಇಲ್ಲವಂತೆ...

ಗಾಂಧಿ ಮತ್ತು ಗೋಡ್ಸೆ...



ಅಸಮಾನತೆಗಳ ಆತ್ಮಕ್ಕೆ
ಅಹಿಂಸೆಯ ಚರ್ಮ
ತೊಟ್ಟಿದ್ದವರಿಗೆ,
ಗುಂಡಿಟ್ಟ ಯುವಕನ
ಹೃದಯದಲಿದ್ದುದು
ಒಂದೇ ಆಸೆಯಂತೆ;
ಅದು ತಾಯಿ ಭಾರತಿಯ
ಪೂಜಕರಿಗೆ...
ನೆಮ್ಮದಿಯ ತಾಯ್ನೆಲವ
ಉಳಿಸಿಕೊಡುವುದಂತೆ.

ಲೈಕು....



ನನ್ನ ಕವನದ
ಪ್ರತೀ ಪದಗಳ
ಉತ್ಕಟ ಆಸೆ,
ಅವಳ ಕೈಯ
ಲೈಕಿನ ಸ್ಪರ್ಶ

ಜಾತಿ



ಜಾತಿ ವೈಷಮ್ಯವ
ತೊಡೆದು ಹಾಕಿ
ಎಂದದ್ಭುತ ಕವನ
ಬರೆದ ಕವಿಯೂ
ಕೂಡ....
ಕೊನೆಯಲ್ಲಿ ತನ್ನ ತಾ
ಗುರುತಿಸಿಕೊಂಡಿದ್ದು
ದಲಿತ ಕವಿಯೆಂದು.