ಹುಟ್ಟಿ ಬರಬೇಕು ನೀ
ಮತ್ತೆ ಈ ನೆಲದ ಮೇಲೆ
ಭರತ ಮಾತೆಯ ರಕ್ಷಣೆಗೆ.
ಮನದ ಈ ಬಯಕೆಯ
ಬೆನ್ನಲ್ಲೇ ಕರಾಳ ಸತ್ಯದರ್ಶನ;
ಬೇಡ ಬರಬೇಡ...
ಮತ್ತದೇ ಧನದಾಹಿ ಮಾಧ್ಯಮದ
ಹಾಳು ಕೆಮರಾ ಕಣ್ಣುಗಳು
ನಿನ್ನ ತೋರಿಸಿ ಕೊಟ್ಟಾವು
ಶತ್ರು ಪಾಳಯಕೆ....
ಅವುಗಳ ಧನದಾಹಕ್ಕೆ
ಸುಮ್ಮನೆ ನೀ ನೆತ್ತರ ಹರಿಸಬೇಡ
ಉಸಿರ ನಿಲಿಸಬೇಡ...
ಹುಟ್ಟಿ ಬರಬೇಡ... ನೀ
ಮತ್ತೆ ಹುಟ್ಟಿ ಬರಬೇಡ.
---ಕೆ.ಗುರುಪ್ರಸಾದ್
ಸಂದೀಪ್ ಉನ್ನಿಕೃಷ್ಣನ್ ನಂತಹ ವೀರತ್ವ ನಮ್ಮಲ್ಲೇ ಹುಟ್ಟಲಿ... ಒಂದು ಸಣ್ಣ ನುಡಿನಮನ ಆ ದಿವ್ಯ ಚೇತನದ ಜನುಮ ದಿನದಂದು... ಅಂತೆಯೇ ಆ ದೇಶದ್ರೋಹಿ ಮಾದ್ಯಮಗಳಿಗೊಂದು ಧಿಕ್ಕಾರ...
No comments:
Post a Comment