Sunday 29 January, 2012
Saturday 28 January, 2012
Thursday 26 January, 2012
Tuesday 24 January, 2012
ಅಂದು ಹೊರಗಿನ ಬ್ರಿಟಿಷರು
ಇಂದು ನಮ್ಮೊಳಗಿನ ಭ್ರಷ್ಟರು
ಅಂದಿನಿಂದ ಇಂದಿನವರೆಗೂ
ನಿರಂತರವಾಗಿ ಹರಿದು ಬರುತಿಹುದು
ತಾಯಿ ಭಾರತಿಯ ಕಣ್ಣಲ್ಲಿ ಕಣ್ಣೀರು..
ಕೂಗಿ ಕರೆ ತಾಯೇ
ನಿನಗಾಗಿ ವೀರ ಮರಣವನಪ್ಪಿದ
ಕೆಚ್ಚೆದೆಯ ಪರಾಕ್ರಮಿಗಳ...
ಇಂದಿನ ನಿನ್ನ ಸಂತಾನದಲಿ
ಇರುವವರೆಲ್ಲರೂ ನಿರ್ವೀರ್ಯರು..
ನಿನ್ನ ನೋವಿಗೆ ಸ್ಪಂದಿಸುವ
ಮನವಿರದ ಬರಿಯ ಶರೀರಗಳು..
ಶತಮಾನದಾಚೆ ಇಂದಿನ ದಿನದಂದೇ
ನೀ ಹೆತ್ತು ಜಗಕರ್ಪಿಸಿದ್ದೆ ಒಬ್ಬ ಗಂಡುಗಲಿಯ
ಅಪ್ರತಿಮ ಸೇನಾನಿಯ, ಅದಮ್ಯ ಸಾಹಸಿಯ.
ಇಂದು ಕೂಡ ಅಂತಹಾ ಪುತ್ರನೋರ್ವನ
ಇರುವಿಕೆಯ ಅಗತ್ಯತೆಯ ಮನಗಾಣೆಯಾ..
ನಿನ್ನ ಬಗೆಗಿನ ಪ್ರೇಮವನು ಮರೆತು
ಗಾಢ ನಿದ್ದೆಯಲಿಹ ನಿನ್ನದೇ ಮಕ್ಕಳನೆಬ್ಬಿಸಲು
ಮತ್ತೊಮ್ಮೆ ಸುಭಾಸರ ಹೆತ್ತು ಕೊಡು ತಾಯೆ..
ಅವರ ಮಾತೃಭಕ್ತಿಯ ಮತ್ತೊಮ್ಮೆ ನಿನ್ನಕಣ್ತುಂಬ
ನೋಡಿ, ಸಂತಸದ ಕಣ್ಣೀರ ಹರಿಸಿಬಿಡು ತಾಯೆ..
ಇಂದು ನಮ್ಮೊಳಗಿನ ಭ್ರಷ್ಟರು
ಅಂದಿನಿಂದ ಇಂದಿನವರೆಗೂ
ನಿರಂತರವಾಗಿ ಹರಿದು ಬರುತಿಹುದು
ತಾಯಿ ಭಾರತಿಯ ಕಣ್ಣಲ್ಲಿ ಕಣ್ಣೀರು..
ಕೂಗಿ ಕರೆ ತಾಯೇ
ನಿನಗಾಗಿ ವೀರ ಮರಣವನಪ್ಪಿದ
ಕೆಚ್ಚೆದೆಯ ಪರಾಕ್ರಮಿಗಳ...
ಇಂದಿನ ನಿನ್ನ ಸಂತಾನದಲಿ
ಇರುವವರೆಲ್ಲರೂ ನಿರ್ವೀರ್ಯರು..
ನಿನ್ನ ನೋವಿಗೆ ಸ್ಪಂದಿಸುವ
ಮನವಿರದ ಬರಿಯ ಶರೀರಗಳು..
ಶತಮಾನದಾಚೆ ಇಂದಿನ ದಿನದಂದೇ
ನೀ ಹೆತ್ತು ಜಗಕರ್ಪಿಸಿದ್ದೆ ಒಬ್ಬ ಗಂಡುಗಲಿಯ
ಅಪ್ರತಿಮ ಸೇನಾನಿಯ, ಅದಮ್ಯ ಸಾಹಸಿಯ.
ಇಂದು ಕೂಡ ಅಂತಹಾ ಪುತ್ರನೋರ್ವನ
ಇರುವಿಕೆಯ ಅಗತ್ಯತೆಯ ಮನಗಾಣೆಯಾ..
ನಿನ್ನ ಬಗೆಗಿನ ಪ್ರೇಮವನು ಮರೆತು
ಗಾಢ ನಿದ್ದೆಯಲಿಹ ನಿನ್ನದೇ ಮಕ್ಕಳನೆಬ್ಬಿಸಲು
ಮತ್ತೊಮ್ಮೆ ಸುಭಾಸರ ಹೆತ್ತು ಕೊಡು ತಾಯೆ..
ಅವರ ಮಾತೃಭಕ್ತಿಯ ಮತ್ತೊಮ್ಮೆ ನಿನ್ನಕಣ್ತುಂಬ
ನೋಡಿ, ಸಂತಸದ ಕಣ್ಣೀರ ಹರಿಸಿಬಿಡು ತಾಯೆ..
Friday 20 January, 2012
Tuesday 17 January, 2012
ಏನು ಬರೆಯಲಿ? ನಾನೇನು ಬರೆಯಲಿ?
ಬರೆವ ಮನಸಿರುವುದೇನೋ ನಿಜ
ಚೆಲುವಾದ ಕವನ ಬರೆಯಲು
ಮನ ಚಡಪಡಿಸುತಿಹುದೂ ನಿಜ
ಆದರೆ ನನ್ನೊಳಗಿನ ಈ ಬಯಕೆಗೆ
ಈ ಕ್ಷಣ ಪದಗಳ ಸಹಕಾರವಿಲ್ಲ,
ಭಾವನೆಗಳ ಸಹಯೋಗವಿಲ್ಲ.
ಅಂದೆಂದೋ ನನ್ನ ಮನದ ಮನೆಗೆ ಬಂದಿದ್ದ
ಚೆಲುವಾದ ಪದಪುಂಜಗಳೆನುವ
ಅತಿಥಿಗಳಿಗೆ ನಾ ಕೊಟ್ಟ ಆತಿಥ್ಯ
ಸಾಕಾಗಲಿಲ್ಲವೇನೋ...
ಅದಕಾಗಿ ಇಂದವರ ಆಗಮನದ
ನಿರೀಕ್ಷೆ ಇದ್ದರೂ..
ಆ ಅತಿಥಿಗಳು ಆಗಮಿಸಲಿಲ್ಲ.
ಮುಖ ತಿರುಗಿಸಿ ಹೊರಟು ಹೋಗಿಹರು
ದೂರದ ಮರೆವಿನೂರಿಗೆ.
ಸ್ವಾಗತಿಸಲು ನಿಂತ ಮನಕೆ
ಕಂಡದ್ದು ನಿರಾಶೆಯೆಂಬ ಆಗಂತುಕರು.
ಆದರೂ ಮನವು ತನ್ನ ತಾ ಸಂತೈಸುತಿಹುದು...
ಈ ರೀತಿ..
ಕವಿತೆಯೆಂಬುದು ಮಾನವನ
ಮನದೊಳಗೆ ಮುಡುವಂತಾದ್ದಲ್ಲ;
ಅದರ ಸೃಷ್ಠಿಕರ್ತ ಭಗವಂತ.
ಕವಿಯೆನುವವನು ಬರಿಯ ಬಳಪ ಅವನಿಗೆ.
ನಾನೆನುವ ಬಳಪವನು ಬಳಸಿಕೊಂಡು
ನನ್ನ ಹರಸಿಯಾನು ಆ ದೇವ
ಒಂದಲ್ಲ ಒಂದು ದಿನ.
ಅಂದು ಆ ಮುಲಕವಿಯನು ಹೊಗಳದೆ
ಈ ಬಳಪವನು ಹೊಗಳಿಯಾರು
ಜಗದೊಳಗಿನ ಕಾವ್ಯಪ್ರಿಯರೆಂಬ ಕುರುಡು ಜನ.
Sunday 15 January, 2012
Wednesday 4 January, 2012
ಚಿತ್ರ ಕವನ
ಕಾರ್ಮುಗಿಲೇ ನೀ ಸ್ಪೋಟಿಸಿ
ನನ್ನ ಕೊಚ್ಚಿಕೊಂಡೊಯ್ಯಬಾರದೇ..
ಕಡಲಿನ ಅಬ್ಬರದ ಅಲೆಗಳೇ...
ನನ್ನ ನಿನ್ನೆಡೆಗೆ ಬರಸೆಳೆದುಕೊಳ್ಳಬಾರದೇ...
ಕಾಮುಕನೋರ್ವನ ಹಸಿವಿಗಾಹಾರವಾಗಿ ಹೋದೆನೇ..
ಅದೆಷ್ಟು ಪ್ರತಿಭಟಿಸಿದರೂ ಶೀಲವನುಳಿಸಿಕೊಳ್ಳಲಾರದೇ ಹೋದೆನೇ..
ಇನ್ನೇಕೆ ಈ ಜೀವನವು..
ಸಮಾಧಿಯೇ, ನಿನ್ನ ಮನೆಯ ಬಾಗಿಲನು
ಬಡಬಡನೆ ಬಡಿಯುತಿಹುದು ನಿನಗಿನ್ನೂ ಕೇಳದೇ..
ಒಡಲಲಿ ಉಸಿರಿರುವುದ ಕಂಡು ಕದವ ತೆರೆಯದಿರಬೇಡ..
ಆತ್ಮವೇ ಇಲ್ಲ, ಶೀಲವಿರದ ನನ್ನೀ ತನುವಿಗೆ
ನಿನ್ನೊಡಲೆ ಬೇಕೆಂದೆನಿಸುತಿದೆ, ನೊಂದ ನನ್ನ ಮನಸಿಗೆ..
Subscribe to:
Posts (Atom)