Wednesday 4 January, 2012

ಚಿತ್ರ ಕವನ




ಕಾರ್ಮುಗಿಲೇ ನೀ ಸ್ಪೋಟಿಸಿ
ನನ್ನ ಕೊಚ್ಚಿಕೊಂಡೊಯ್ಯಬಾರದೇ..
ಕಡಲಿನ ಅಬ್ಬರದ ಅಲೆಗಳೇ...
ನನ್ನ ನಿನ್ನೆಡೆಗೆ ಬರಸೆಳೆದುಕೊಳ್ಳಬಾರದೇ...


ಕಾಮುಕನೋರ್ವನ ಹಸಿವಿಗಾಹಾರವಾಗಿ ಹೋದೆನೇ..
ಅದೆಷ್ಟು ಪ್ರತಿಭಟಿಸಿದರೂ ಶೀಲವನುಳಿಸಿಕೊಳ್ಳಲಾರದೇ ಹೋದೆನೇ..


ಇನ್ನೇಕೆ ಈ ಜೀವನವು..


ಸಮಾಧಿಯೇ, ನಿನ್ನ ಮನೆಯ ಬಾಗಿಲನು
ಬಡಬಡನೆ ಬಡಿಯುತಿಹುದು ನಿನಗಿನ್ನೂ ಕೇಳದೇ..
ಒಡಲಲಿ ಉಸಿರಿರುವುದ ಕಂಡು ಕದವ ತೆರೆಯದಿರಬೇಡ..
ಆತ್ಮವೇ ಇಲ್ಲ, ಶೀಲವಿರದ ನನ್ನೀ ತನುವಿಗೆ
ನಿನ್ನೊಡಲೆ ಬೇಕೆಂದೆನಿಸುತಿದೆ, ನೊಂದ ನನ್ನ ಮನಸಿಗೆ..

No comments:

Post a Comment