Tuesday 24 January, 2012

ಅಂದು ಹೊರಗಿನ ಬ್ರಿಟಿಷರು
ಇಂದು ನಮ್ಮೊಳಗಿನ ಭ್ರಷ್ಟರು
ಅಂದಿನಿಂದ ಇಂದಿನವರೆಗೂ
ನಿರಂತರವಾಗಿ ಹರಿದು ಬರುತಿಹುದು
ತಾಯಿ ಭಾರತಿಯ ಕಣ್ಣಲ್ಲಿ ಕಣ್ಣೀರು..
ಕೂಗಿ ಕರೆ ತಾಯೇ
ನಿನಗಾಗಿ ವೀರ ಮರಣವನಪ್ಪಿದ
ಕೆಚ್ಚೆದೆಯ ಪರಾಕ್ರಮಿಗಳ...
ಇಂದಿನ ನಿನ್ನ ಸಂತಾನದಲಿ
ಇರುವವರೆಲ್ಲರೂ ನಿರ್ವೀರ್ಯರು..
ನಿನ್ನ ನೋವಿಗೆ ಸ್ಪಂದಿಸುವ
ಮನವಿರದ ಬರಿಯ ಶರೀರಗಳು..
ಶತಮಾನದಾಚೆ ಇಂದಿನ ದಿನದಂದೇ
ನೀ ಹೆತ್ತು ಜಗಕರ್ಪಿಸಿದ್ದೆ ಒಬ್ಬ ಗಂಡುಗಲಿಯ
ಅಪ್ರತಿಮ ಸೇನಾನಿಯ, ಅದಮ್ಯ ಸಾಹಸಿಯ.
ಇಂದು ಕೂಡ ಅಂತಹಾ ಪುತ್ರನೋರ್ವನ
ಇರುವಿಕೆಯ ಅಗತ್ಯತೆಯ ಮನಗಾಣೆಯಾ..
ನಿನ್ನ ಬಗೆಗಿನ ಪ್ರೇಮವನು ಮರೆತು
ಗಾಢ ನಿದ್ದೆಯಲಿಹ ನಿನ್ನದೇ ಮಕ್ಕಳನೆಬ್ಬಿಸಲು
ಮತ್ತೊಮ್ಮೆ ಸುಭಾಸರ ಹೆತ್ತು ಕೊಡು ತಾಯೆ..
ಅವರ ಮಾತೃಭಕ್ತಿಯ ಮತ್ತೊಮ್ಮೆ ನಿನ್ನಕಣ್ತುಂಬ
ನೋಡಿ, ಸಂತಸದ ಕಣ್ಣೀರ ಹರಿಸಿಬಿಡು ತಾಯೆ..

No comments:

Post a Comment