Sunday 29 January, 2012


ಮುಂಜಾವಿನಿಂದ ಮುಸ್ಸಂಜೆಯವರೆಗೆ
ಬಣ್ಣ ಬಣ್ಣದ ತೊಡುಗೆಗಳ ತೊಟ್ಟು
ನೀಲಿ ನೀಲಿ ಪರದೆಯ ಮುಂದೆ
ತನ್ನ ಪಾತ್ರವನಾಡಿ ಬಳಲಿದನು ನೇಸರ.
ಇದುವೇ ಸರಿಯಾದ ಸಮಯವೆಂದು
ತಾರೆಗಳ ತಂಡವನೇ ಕರೆತಂದು
ಕಪ್ಪು ಬಣ್ಣದ ಪರದೆಯನು ಎಳೆದು
ಆಗಸದ ರಂಗಮಂಟಪವನಾವರಿಸಿದನು ಚಂದಿರ

1 comment:

  1. ಇಷ್ಟೆಲ್ಲಾ ಓದಿ ನೋಡಿದರೆ..
    'ಕಡಲ ತೀರದ ಭಾರ್ಗವ' ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರ.. ನೆನಪಾಗಿ... ಈಗ ನಿಜಕ್ಕೂ ನಿಮ್ಮನ್ನು ...
    ಕಡಲ ತೀರದ ಭಾಸ್ಕರ .. ಎಂದು ಕರೆಯಬಹುದೇ... :) ಮ್.. ಬರಲಿ ಭಾಸ್ಕರನ ಮತ್ತಷ್ಟು ಕಲ್ಪನಾ ಲೋಕ ನಿಮ್ಮಿಂದ .. ಅದೇಕೋ ಅದರಲ್ಲಿ ವಿಶೇಷ ಸೆಳೆತ ಇದೆ.. ನಿಮಗೂ ಮತ್ತು ನಿಮ್ಮ ಪದಗಳ ರಚನೆಗೂ.. :)

    ReplyDelete