Thursday, 26 December 2013
ಅಟಲರಿಗೊಂದು ನಮನ...
ನಾಲಗೆಯಲಿ ವಾಗ್ಝರಿಯ ಗಂಗೋತ್ರಿ,
ಮನಸಿನಲೊಂದು ಕವಿಭಾವದ ಕಡಲು
ಕಂಗಳಲಿ ಬರಿಯ ಭವ್ಯ ಭಾರತದ ಕನಸು
ಹೃದಯದಲಿ ತಾಯಿ ಭಾರತಿಗೊಂದು ಗರ್ಭಗುಡಿ
ನಿಲುವಿನಲಿ ಸಭ್ಯತೆಯ ರಾಜ ಗಾಂಭೀರ್ಯ
ರಾಜಕೀಯದ ಕೆಸರಿನಲರಳಿದ " ಕಮಲ "
ಅವರೇ ಅಜಾತಶತ್ರು ನಮ್ಮ ನೆಚ್ಚಿನ " ಅಟಲ "
ನಿರಾಳ...
ಭಾವಾಭಿವ್ಯಕ್ತಿಗೆ
ಹಲವು
ಮಾರ್ಗಗಳಿದ್ದರೂ
ನನ್ನೀ ಕವಿಮನಕ್ಕೆ
ನಿರಾಳತೆಯ
ಅನುಭವವಾಗುವುದು
ಭಾವನೆಗಳು
ಹಾಳೆಯ ಮೇಲಿನ
ಪದಗಳಾದಾಗಲೇ..
ಬೆರಗು
ಸುತ್ತಲೂ ಹರಡಿದ್ದ
ಕತ್ತಲಿಗೆ ಹೆದರಿ
ಅಡಗಿ ಕುಳಿತಿದ್ದ ರವಿ,
ಹಿಡಿದು ಕಡಲ ತಾಯಿಯ
ನೀಲಿ ಸೀರೆಯ ಸೆರಗು ;
ಕತ್ತಲು ಮೆಲ್ಲಗೆ ಮರೆಯಾಗೆ
ಆ ಸೆರಗ ಮುಸುಕನು ಸರಿಸಿ
ಹೊರಬರುವ ನೇಸರ
ತನ್ನೊಡಲ ಬೆಳ್ಳಿಕಿರಣದ
ರೋಮಗಳ ತೋರಿಸೆ
ಜಗಕ್ಕೆಲ್ಲಾ ಬೆರಗು...
Subscribe to:
Comments (Atom)