maunada mathu
Saturday, 25 January 2014
ಹವ್ಯಾಸ...
ನನ್ನ ಮನದರಮನೆಗೆ
ಆಗಾಗ ಬರುವ
ನನ್ನವಳ ನೆನಪಿಗೆ..
ನನ್ನ ಕಣ್ಣ
ಪಂಜರದಲಿನ
ಕಣ್ಣೀರ ಖಗಗಳನು,
ಬಂಧನದಿಂದ
ಮುಕ್ತಗೊಳಿಸುವುದೇ...
ಬಲು ಮೆಚ್ಚಿನ
ಹವ್ಯಾಸ....
ರಾಜಾಜ್ಞೆ...
ಪ್ರಿಯೆ, ನನ್ನ ಹೃದಯದ
ರಾಜ ಸಿಂಹಾಸನದಲಿ
ನೀನೇ ಕುಳಿತಿರುವೆ...
ಎಂದು ಅವಳ ಬಳಿ
ಹೇಳಲೇಬಾರದಿತ್ತು..
ಈಗ ಮಾತು ಮಾತಿಗೂ
ಇದು ರಾಜಾಜ್ಞೆ...
ಪಾಲಿಸಲೇಬೇಕು
ಅನ್ನುತ್ತಿದ್ದಾಳೆ.
ಪ್ರಬುದ್ಧ ಪ್ರಶ್ನೆ...?
" ಆಸೆ "ಯ
ತೊರೆಯುವವನೇ
ಬುದ್ಧನಾಗಲು
ಸಾಧ್ಯವಂತೆ...
ಹಾಗಾದರೆ
ಬುದ್ಧನಾಗುವ
" ಆಸೆ "
ಹೊತ್ತವ ಹೇಗೆ
ಬುದ್ಧನಾದಾನು...?
ಎನುವುದೇ
ನನ್ನನ್ನಿಕ್ಕಟ್ಟಿಗೆ
ಸಿಲುಕಿಸಿರುವ
ಪ್ರಬುದ್ಧ ಪ್ರಶ್ನೆ...?
ಮಾತು
ನಸುಕಿನ
ಮುಂಜಾವಿನಲೇ
ಬಂದು ಬಿಡುವೆ
ಎಂದು ವಸುಧೆಗಿತ್ತ
ತನ್ನ ಮಾತನ್ನ
ಎಂದಿಗೂ ರವಿ
ಮುರಿಯುವುದೇ ಇಲ್ಲ
ಜಲಪಾತ
ನನ್ನಯಾ
ಕಣ್ಣಗುಡ್ಡೆಯಲಿದೆ;
ಅವಳ ಹೆಸರಿನ
ಧುಮ್ಮಿಕ್ಕುವ
ದೊಡ್ಡ ಜಲಪಾತ.
ಆದರಿನ್ನೂ ಅದು
ಜನರ ಕಣ್ಣಿಗೆ
ಬಿದ್ದೇ ಇಲ್ಲ.
ಚಿತ್ತಾರ
ಚಂದ್ರ ಬಿಡಿಸಿದ್ದ
ಬಿಳಿ ಚುಕ್ಕಿಗಳ
ಚಿತ್ರವನಳಿಸಿ;
ಆಗಸದ ತುಂಬೆಲ್ಲಾ
ಕ್ಷಣಕೊಂದರಂತೆ
ವರ್ಣರಂಜಿತ
ಚಿತ್ತಾರಗಳ
ಬಿಡಿಸತೊಡಗಿದ
ನೇಸರ,
ಅಬ್ಬಾ....
ಪ್ರತಿಯೊಂದು
ಚಿತ್ತಾರವೂ
ಅದೆಷ್ಟು ಸುಂದರ.
ಬರಹ...
ನನ್ನ ಹೃದಯದಲಿ
ಸೊಗಸಾಗಿ
ಮತ್ತೆ ಮತ್ತೆ ನಿನ್ನ ಹೆಸರ
ಬರೆಯುತ್ತಲಿದ್ದೆ...
ಆದರೇನು ಮಾಡಲಿ..
ಅದಾಗಲೇ ಬ್ರಹ್ಮ
ಅವಳ ಹೆಸರ ಇನ್ನೊಬ್ಬನ
ಹಣೆಯಲ್ಲಿ ಬರೆದು ಬಿಟ್ಟಿದ್ದ.
Newer Posts
Older Posts
Home
Subscribe to:
Comments (Atom)