Saturday 25 January, 2014

ಸ್ವಾಮಿ ವಿವೇಕ ಆನಂದ



ನೂರೈವತ್ತು ವರುಷಗಳ ಹಿಂದೊಮ್ಮೆ
ಭಾರತದಲುದಯವಾಗಿತ್ತು
ದಿವ್ಯತೇಜವೊಂದು...
ಭರತ ಮಾತೆಯ ಮುಖದ
ವಿಷಾದದಳುವ ನಿಲ್ಲಿಸಲು...
ರಾಮಕೃಷ್ಣರ ಗರಡಿಯಲಿ
ಪಳಗಿ ಸಜ್ಜಾಗಿ,
ಹೆಜ್ಜೆಯಿಟ್ಟರು ವಿದೇಶದೆಡೆಗೆ...
ಸನಾತನ ಧರ್ಮದ ಸುಗಂಧವ
ಜಗದಗಲದಿ ಪಸರಿಸಲು...
ಸಹೋದರತೆಯ ಭಾವ ಹರಡಿ
ಕರಾಡತನವ ಸೂರೆಗೈದು
"ವಿವೇಕವೂ ಆನಂದವೂ"
ಆಗಿಬಿಟ್ಟರು... ಇಡಿಯ ವಿಶ್ವಕೆ...
ಮರಳಿ ಭಾರತಕೆ ಆಡಿಯಿಟ್ಟು
ಭರತ ಮಾತೆಯ ಮಕ್ಕಳಲಿನ
ಜಡವ ತೊಳೆಯತೊಡಗಿದರು...
ಭಾರತಾಂಬೆಯ ಪಾದದಡಿಯಲಿ
ಕುಳಿತು ಅವಳನೇ ತಪಗೈದು
ಧನ್ಯರಾದರು....
ಅವಳ ದಿವ್ಯದರ್ಶನವ ಪಡೆದು,
"ಏಳಿ ಎದ್ದೇಳಿ" ಎನುವ ರಣಘೋಷ
ಅವರಿಲ್ಲವಾದರೂ ಮೊಳಗುತಿದೆ ಇಂದಿಗೂ
ಆದರೂ ನಮ್ಮಲ್ಲಿ ಮಲಗಿರುವವರಿಹರು...
ಮಾತೃಧರ್ಮದ ರಕ್ಷಣೆಯ ಮರೆತು...
ಗುರಿಯನೆಂತು ತಲುಪುವುದು...?
ಎಚ್ಚರವಾಗುವ ಬಯಕೆಯೇ ಇಲ್ಲದಿರೆ...?
ಪ್ರತಿ ಮನದ ವಿವೇಕವದು ಜಾಗೃತವಾಗಿ
ತಾಯಿ ಭಾರತಿಯ ಮೊಗದಲಾನಂದ
ಕಾಣಲು ನಾವೆಲ್ಲರೂ "ವಿವೇಕ"ರಂತಾಗಲೇ ಬೇಕು
ಉತ್ಸಾಹದುಕ್ಕಿನ ಮಾಂಸ ಖಂಡಗಳ
ಬೆಳೆಸಿಕೊಳ್ಳೋಣ ಭಾರತೀಯರೇ...
ದುಷ್ಟಸಂಹಾರಕೆ ಕೈಬೆರಳ ಮುಷ್ಟಿಯಾಗಿಸೋಣ..
ಬನ್ನಿ ದೇಶಭಕ್ತ ಬಾಂಧವರೇ...ಎದ್ದೇಳೋಣ ಬನ್ನಿ...
ಭವ್ಯ ಭಾರತ ನಿರ್ಮಾಣವೇ ನಮ್ಮ ಏಕೈಕ ಗುರಿಯೆನ್ನಿ..

---ಕೆ.ಗುರುಪ್ರಸಾದ್

ಸಿಡಿಲ ಸಂತ ವಿವೇಕಾನಂದರ ಜನ್ಮದಿನದ ಹಾರ್ದಿಕ ಶುಭಾಶಯಗಳು.... ಅವರ ವ್ಯಕ್ತಿತ್ವವನು ಪದಗಳಲಿ ಬಂಧಿಸಿಡಲು ಸಾಧ್ಯವಿಲ್ಲ ಆದರೂ ಇದು ನನ್ನ ಪಾಲಿನ ಸಣ್ಣ ನುಡಿ ನಮನ

No comments:

Post a Comment