ಬಿಹಾರದ ಭೂಪ ಲಲ್ಲೂ
ದೇಹವೋ ಅವನದು ಗುಂಡು ಕಲ್ಲು
ಹಣವನು ಕಂಡರೆ ಸುರಿಸುವನು ಜೊಲ್ಲು
ಧ್ಯೇಯ ಅವನದು; ಹಣಕಾಗಿ ಯಾರಬೇಕಾದರೂ ಕೊಲ್ಲು
ಅನ್ಯಾಯವೇ ತುಂಬಿದೆ ಅವನ ರಕ್ತದ ಹನಿ ಹನಿಯಲ್ಲೂ
ಆದ್ದರಿಂದ ಆಗಲೇಬೇಕು ಅವನಿಗೆ ಗಲ್ಲು
ನನ್ನದಲ್ಲ; ಇದು ಅಲ್ಲಿನ ಜನತೆಯ ಸೊಲ್ಲು
ಪೋಲೀಸ್
ಆಗುವುದು
ಪೋಲೀಸರ
ಆಗಮನ
ಆದ
ಮೇಲೆ
ಕಳ್ಳಕಾಕರ
ಪಲಾಯನ
ರೈತ
ಹೊಲ ಗದ್ದೆಯಲಿ ದುಡಿಯುತಾ
ಬೆಳೆ ಬೆಳೆಯುವನು ಬೆವರ ಸುರಿಸುತಾ
ಪ್ರತಿ ನಿಮಿಷವೂ ಕೆಲಸದಲೆ ನಿರತ
ಬೆಳೆದ ಬೆಳೆಯನು ದೇಶದ ಜನತೆಗೆ ನೀಡುತಾ
ದೇಶೋದ್ಧಾರಕಾಗಿ ಶ್ರಮಿಸುವ ಈತ
ನಿಜವಾದ ದೇಶಭಕುತ