Wednesday, 5 October 2011


ಲಲ್ಲೂ

ಬಿಹಾರದ ಭೂಪ ಲಲ್ಲೂ
ದೇಹವೋ ಅವನದು ಗುಂಡು ಕಲ್ಲು
ಹಣವನು ಕಂಡರೆ ಸುರಿಸುವನು ಜೊಲ್ಲು
ಧ್ಯೇಯ ಅವನದು; ಹಣಕಾಗಿ ಯಾರಬೇಕಾದರೂ ಕೊಲ್ಲು
ಅನ್ಯಾಯವೇ ತುಂಬಿದೆ ಅವನ ರಕ್ತದ ಹನಿ ಹನಿಯಲ್ಲೂ
ಆದ್ದರಿಂದ ಆಗಲೇಬೇಕು ಅವನಿಗೆ ಗಲ್ಲು
ನನ್ನದಲ್ಲ; ಇದು ಅಲ್ಲಿನ ಜನತೆಯ ಸೊಲ್ಲು

ಪೋಲೀಸ್

ಆಗುವುದು
ಪೋಲೀಸರ
ಆಗಮನ
ಆದ
ಮೇಲೆ
ಕಳ್ಳಕಾಕರ
ಪಲಾಯನ

ರೈತ

ಹೊಲ ಗದ್ದೆಯಲಿ ದುಡಿಯುತಾ
ಬೆಳೆ ಬೆಳೆಯುವನು ಬೆವರ ಸುರಿಸುತಾ
ಪ್ರತಿ ನಿಮಿಷವೂ ಕೆಲಸದಲೆ ನಿರತ
ಬೆಳೆದ ಬೆಳೆಯನು ದೇಶದ ಜನತೆಗೆ ನೀಡುತಾ
ದೇಶೋದ್ಧಾರಕಾಗಿ ಶ್ರಮಿಸುವ ಈತ
ನಿಜವಾದ ದೇಶಭಕುತ

Tuesday, 4 October 2011


ಜಡದಿಂದ
ಮಲಗಿರುವ
ತನುವಿಗೆ
ಜಡ ಕಳೆಯಲೇನು
ಬೇಕು?
ರವಿಯ
ಹೊನ್ನ ಕಿರಣ
ಸಾಕು.
ದಿನ ನಿತ್ಯದ
ಕಾಯಕದ
ನೆನಪು
ಸಾಕು.

ಚಂದಿರ

ಆಕಾಶವೆನುವ
ಅಂಗಡಿಯಲಿ
ಕಪ್ಪು ಬಣ್ಣದ
ಹೊದಿಕೆಯ ಹಾಸಿ
ತಾರೆಗಳೆನುವ
ಹೊಳೆಯುವ
ಮುತ್ತು, ರತ್ನ
ವಜ್ರ, ವೈಢೂರ್ಯಗಳ
ಮಾರಲು ಕುಳಿತ
ವ್ಯಾಪಾರಿ
ಭೂ ರಮೆ

ಆ ಮೇಘರಾಜನ ಉಡುಗೊರೆ
ಭೂ ದೇವಿಗೀ ಹಸಿರು ಸೀರೆ
ಅದನುಟ್ಟು ನಿಂತ ಆಕೆಯ ಕಂಡರೆ
ಅಸೂಯೆ ಪಟ್ಟಾಳು ದೇವಲೋಕದಪ್ಸರೆ

ಕುಹೂ ಕುಹೂ ಎಂದು ಇಂಪಾಗಿ ಕುಗುತಾ
ಈಕೆಯಂದವ ಕೋಗಿಲೆ ಹೊಗಳುತಿದೆ ಹಾಡುತ
ಜುಳು ಜುಳು ನಾದವ ಮಾಡಿ ; ಹರಿಯುತಿದೆ ನದಿ ಬಳಕುತ
ಕೋಗಿಲೆಯ ಹಾಡಿಗೆ ತಾನೂ ಧ್ವನಿ ಸೇರಿಸುತ

ಇಣುಕಿಣುಕಿ ನೋಡುವನು ರವಿ ಈಕೆಯಂದ
ಗಗನ ಪೂರ್ತಿ ಇರುವ ಮೋಡದ ಮರೆಯಿಂದ
ಸ್ಪರ್ಶಿಸುವನು ಆಕೆಯ ತನ್ನ ಬೆಳ್ಳಿ ಕಿರಣದಿಂದ
ಆಲಿಂಗಿಸಲಾಗದ ನೋವ ಮರೆತು ಆನಂದದಿಂದ


Monday, 26 September 2011

ಪ್ರತೀಕಾರ


ಇಡಿಯ ವಿಶ್ವದಲ್ಲೆಲ್ಲ
ಸಾವು ನೋವುಗಳೇ
ತುಂಬಿ ತುಳುಕಾಡುತಿರುವುದ
ಪ್ರತಿ ನಿತ್ಯವೂ ನೋಡುತ್ತಿದ್ದರೂ
ನಿನ್ನ ನಡೆಯಲ್ಲಿ
ಎಂದೂ ಬದಲಾವಣೆ ಇಲ್ಲ;
ಅದಕಾಗಿಯೇ ಏನೋ
ಸಂಜೆಯಲಿ ನೆತ್ತರನು ಕಕ್ಕಿ
ಮುಳುಗು ಹಾಕುತ್ತಿದ್ದರೂ
ಆನಂದದಲೇ ನೋಡುವರು ಜನರೆಲ್ಲಾ;
ನಿನ್ನ ಸಾವಿನ ಬಗೆಗೆ
ಒಂದಿನಿತು ಬೇಸರವಿಲ್ಲ.