Tuesday, 3 April 2012

ಬೇಡಿಕೆ




ತಲೆಯ ಮೇಲೆ
ಕೈ ಇಟ್ಟು
ಕುಳಿತಿದ್ದಾರಂತೆ
ಕೇರಳದ ಮುಖ್ಯಮಂತ್ರಿ,
ಹಂಗಾಮಿ ರಾಜ್ಯಪಾಲರ
ಬೇಡಿಕೆಯೊಂದನ್ನು ನೋಡಿ,
ಇರುವ ಎಂಟು
ಕಾರು ಸಾಲದೆ,
ತಿರುಗಾಡೋಕೆ
ಬೇಕಂತೆ ಇವರಿಗೆ
ಎಂಭತ್ತು ಲಕ್ಷದ
ಐಷಾರಾಮಿ
ಕಾರು "ಆಡಿ".

---ಕೆ.ಗುರುಪ್ರಸಾದ್

ಸುದ್ದಿ : ಕೇರಳದ ಹಂಗಾಮಿ ರಾಜ್ಯಪಾಲರಿಂದ (ಪ್ರಸ್ತುತ ಇವರು ಕರ್ನಾಟಕದ ಪ್ರಸಿದ್ಧ ರಾಜ್ಯಪಾಲರು) ಅಲ್ಲಿನ ಸರ್ಕಾರಕ್ಕೆ ಹೊಸ ಬೇಡಿಕೆ ಅವರಿಗೆ "ಆಡಿ "ಕಾರು ಬೇಕಂತೆ.

ಹೀಗೇಕೆ...?


ಸುಖವಾದ
ನಿದ್ದೆಯಿಂದ
ಆದೊಡನೆ
ಎಚ್ಚರಿಕೆ;
ಹೆಚ್ಚಿನವರಿಗೆ
ಬರುವುದೇಕೆ
ಮೈಯಲ್ಲಿ
ಅಲ್ಲಲ್ಲಿ ತುರಿಕೆ...?

ನಿದಿರೆ


ಮಿಲನಕ್ಕೆ ಹಾತೊರೆಯುತ್ತಿರುವ 
ನನ್ನೆರಡು ಕಣ್ಣಿನ ರೆಪ್ಪೆಗಳು;
ತಲೆದಿಂಬಿನ ಮುತ್ತನ್ನು
ಪಡೆಯುವಾಸೆಯಲಿಹ ನನ್ನ ಕೆನ್ನೆಗಳು.


ಹೊದಿಕೆಯೊಂದರ ಆಲಿಂಗನದ
ಆಸೆಯಲಿಹುದೆನ್ನ ಕಾಯ;
ಪ್ರತಿದಿನವೂ ಹೀಗೆಯೇ
ನನ್ನ ನಿದಿರೆ ಸಂಪೂರ್ಣ ಶೃಂಗಾರಮಯ.

ನೋವು


ದಢೂತಿ ದೇಹದವನ
ಬಳಿ ಕುಳಿತು
ಪ್ರಯಾಣಿಸಿದ್ದರಿಂದಾಗಿ
ಇಂದು ನನ್ನ
ಮೈಯೆಲ್ಲಾ ನೋವು,
ಯಾಕೆಂದರೆ
ದಾರಿಯಲ್ಲಿ ಸಿಕ್ಕ
ಘಾಟಿಯಲ್ಲಿ ಇತ್ತಲ್ಲ
ಹತ್ತಿಪ್ಪತ್ತು
"ಹಿ" ತಿರುವು.

Monday, 2 April 2012

ಭಾಗ್ಯ


ಅದೆಷ್ಟೇ
ಪುಣ್ಯದ
ಕೆಲಸವ
ಮಾಡಿದರೂ,
ಅದೆಷ್ಟೇ
ಭಗೀರಥ
ಪ್ರಯತ್ನವ
ಮಾಡಿದರೂ,
ಮತ್ತೆ ಮತ್ತೆ
ಹೆತ್ತ ತಾಯಿಯ
ಗರ್ಭವನು
ಸೇರುವ
ಪರಮ ಭಾಗ್ಯ
ಬರಿಯ
ದಿನಕರನಿಗಷ್ಟೇ
ಸೀಮಿತ

Sunday, 1 April 2012

ರಾಮ


ಮೊದಲಿನವರಿಗೆ
ಬೇಕಾಗಿದ್ದುದು
ಸೀತಾ ರಾಮ;
ಈಗಿನವರಿಗೆ
ಬೇಕಾಗಿರುವುದು
ಬರಿಯ ಆರಾಮ.

ಕಾವಲು




ಮುಸ್ಸಂಜೆಯಲಿ
ಕಾಣದ
ಕಡಲ
ತಳದೂರಿಗೆ
ನೇಸರ
ಹೋಗಿರಲು,
ಆಗಸವೆನುವ
ಅವನ
ತವರೂರಿಗೆ
ಕೋಟಿ
ತಾರೆಯರದೇ
ಕಾವಲು