Sunday, 5 May 2013
ಬಂಡಾಯ...
ಸೂರ್ಯನ
ಉರಿಬಿಸಿಲ
ಪ್ರಲೋಭನೆಗೆ
ಒಳಗಾಗಿ
ನನ್ನ ದೇಹವೆನುವ
ಪಕ್ಷದೊಳಗಿನ
ಬೆವರೆನುವ
ಕಾರ್ಯಕರ್ತರು
ಬಂಡಾಯದ
ರಾಗ ಹಾಡಿ
ಹೊರನಡೆಯುತ್ತಿದ್ದಾರೆ.
ನಮೋ....
ತಾಕತ್ತಿದ್ದರೆ ಮಂಗಳೂರಿಗೆ
ಬನ್ನಿ, ಹೀಗಂದೊಡನೆ
ಬಂದೇ ಬಿಟ್ಟರು
ನಮ್ಮ ನರೇಂದ್ರ ಮೋದಿ;
ತಮ್ಮ ಮಾತಿನಲೇ
"ಕೈ"ಯ ಮುರಿದುದ
ಕಂಡು "ಪೂಜಾರ್ರಿ"ಗೆ
ಶುರುವಾಗಿದೆಯಂತೆ ಈಗ
ತಡೆಯಲಾಗದ ಭೇದಿ.
ಉಡುಗೊರೆ
ಬೆಳ್ಳಂಬೆಳಗ್ಗೆ ಮೋಡಗಳು
ಸುರಿಸಿದ ನೀರಿನಿಂದ
ತೋಯ್ದು ಹೋದ
ವಸುಧೆಯ ತನುವ
ನೋಡಿ ನೇಸರ
ಬೇಸರಗೊಳಲು,
ತನ್ನೊಡಲಲಿಹ
ಕ್ಷಯವಾಗದ ಬಿಸಿಲ
ಬಟ್ಟೆಯೊಂದನು ಕಿತ್ತು
ಧರೆಗುಡುಗೊರೆಯಾಗಿತ್ತ
ಮೈಯನೊರಸಿಕೊಳಲು.
ಬನ್ನಿ ಗೋರಕ್ಷಕರೇ...
ಗೆದ್ದು ಬಂದರೆ
ಗೋಹತ್ಯಾ ನಿಷೇದದ
ವಸೂದೆಯನು, ಸಿದ್ದು
ಮಾಡುವನಂತೆ ರದ್ದು ;
ಬನ್ನಿ ಗೋರಕ್ಷಕರೇ..
ನಾವೆಲ್ಲ ಒಂದಾಗಿ
ಬುದ್ದಿಯ ಕಲಿಸೋಣ
ಎದ್ದು ಇವನೆದೆಗೆ ಒದ್ದು.
ಗೋಹತ್ಯಾ ನಿಷೇದದ
ವಸೂದೆಯನು, ಸಿದ್ದು
ಮಾಡುವನಂತೆ ರದ್ದು ;
ಬನ್ನಿ ಗೋರಕ್ಷಕರೇ..
ನಾವೆಲ್ಲ ಒಂದಾಗಿ
ಬುದ್ದಿಯ ಕಲಿಸೋಣ
ಎದ್ದು ಇವನೆದೆಗೆ ಒದ್ದು.
ಮನಮೋಹನ...
ಮತ ಯಾಚನೆಗಾಗಿ
ಬಾಯಿಗೆ ಹಾಕಿದ್ದ
ಬೀಗವನೊಡೆದು
ಮಾತನಾಡಲು
ಕರುನಾಡಿಗೆ ಬಂದ
ಮ(ಮೌ)ನ ಮೋಹನ;
ಸ್ವಂತದ ಮಾತ ಬಾರದ
ಕೀಲುಗೊಂಬೆಯನೇನು
ನೋಡುವುದು....?
ಎಂದು ಭಾವಿಸಿ
ಸಭೆಗೇ ಹೋಗಲಿಲ್ಲವಂತೆ
ಹುಬ್ಬಳ್ಳಿಯ
ಪ್ರಜ್ನಾವಂತ ಜನ.
Subscribe to:
Comments (Atom)

