Saturday, 25 January 2014

ಭಾಸ್ಕರ



ಜಗಕೆ
ಹಸಿರು,
ಜನಕೆ
ಹಸಿವಿನ
ಅರಿವು ,
ತಂದಿತ್ತದ್ದು
ನೀನೇ..

ನೆನಪು



ಮುಳುಗಿ ಹೋದ
ನೇಸರನ ಸಾವಿನ
ನೋವನು ನುಂಗಿ,
ಅವನ ಬೆಳಕಿನ
ನೆನಪನೇ
ಬೆಳದಿಂಗಳಾಗಿಸಿ
ಜಗದೆಲ್ಲೆಡೆ
ಹಂಚತೊಡಗಿದ
ಚಂದಿರ

ಹೀಗೇಕೆ...?



ಅವಳು
ನಕ್ಕಾಗಲೆಲ್ಲಾ,
ನನ್ನ
ಮುಚ್ಚಿರುವ
ಹೃದಯದ
ಕದವನು
ಯಾರೋ
ತಟ್ಟಿದಂಥಾ
ಅನುಭವ,
ನನಗಾವುದು
ಯಾಕೋ...

ಚೂರಾದ ಹೃದಯ

ನನ್ನೀ ಹೃದಯವನು
ಚೂರುಚೂರಾಗುವಂತೆ
ಒಡೆದು, ಹಾಗೆಯೇ
ಹೊರಟು ಹೋದಿಯಲ್ಲೇ...
ಕಲ್ಲು ಹೃದಯದವಳೇ
ಎಂದು ನಾ ಕೂಗಿದೊಡನೆ
ತಿರುಗಿ ಬಂದ ಆಕೆ
ಕೊಟ್ಟಿದ್ದು...
.
.
.
.
.
.
.
ಐದು ರೂಪಾಯಿಯ
ಫೆವಿಕ್ವಿಕ್.

ಹೆಜ್ಜೆ....

ಅವಳು
ನನ್ನೆಡೆಗಿಟ್ಟ
ಮೊದಲ
ಹೆಜ್ಜೆಯೇ
ಗುರುತೇ
ನನ್ನೆದೆಯ
ಮನೆಯ
ಅಂಗಳದ
ರಂಗವಲ್ಲಿ

ಸ್ವಾಮಿ ವಿವೇಕ ಆನಂದ



ನೂರೈವತ್ತು ವರುಷಗಳ ಹಿಂದೊಮ್ಮೆ
ಭಾರತದಲುದಯವಾಗಿತ್ತು
ದಿವ್ಯತೇಜವೊಂದು...
ಭರತ ಮಾತೆಯ ಮುಖದ
ವಿಷಾದದಳುವ ನಿಲ್ಲಿಸಲು...
ರಾಮಕೃಷ್ಣರ ಗರಡಿಯಲಿ
ಪಳಗಿ ಸಜ್ಜಾಗಿ,
ಹೆಜ್ಜೆಯಿಟ್ಟರು ವಿದೇಶದೆಡೆಗೆ...
ಸನಾತನ ಧರ್ಮದ ಸುಗಂಧವ
ಜಗದಗಲದಿ ಪಸರಿಸಲು...
ಸಹೋದರತೆಯ ಭಾವ ಹರಡಿ
ಕರಾಡತನವ ಸೂರೆಗೈದು
"ವಿವೇಕವೂ ಆನಂದವೂ"
ಆಗಿಬಿಟ್ಟರು... ಇಡಿಯ ವಿಶ್ವಕೆ...
ಮರಳಿ ಭಾರತಕೆ ಆಡಿಯಿಟ್ಟು
ಭರತ ಮಾತೆಯ ಮಕ್ಕಳಲಿನ
ಜಡವ ತೊಳೆಯತೊಡಗಿದರು...
ಭಾರತಾಂಬೆಯ ಪಾದದಡಿಯಲಿ
ಕುಳಿತು ಅವಳನೇ ತಪಗೈದು
ಧನ್ಯರಾದರು....
ಅವಳ ದಿವ್ಯದರ್ಶನವ ಪಡೆದು,
"ಏಳಿ ಎದ್ದೇಳಿ" ಎನುವ ರಣಘೋಷ
ಅವರಿಲ್ಲವಾದರೂ ಮೊಳಗುತಿದೆ ಇಂದಿಗೂ
ಆದರೂ ನಮ್ಮಲ್ಲಿ ಮಲಗಿರುವವರಿಹರು...
ಮಾತೃಧರ್ಮದ ರಕ್ಷಣೆಯ ಮರೆತು...
ಗುರಿಯನೆಂತು ತಲುಪುವುದು...?
ಎಚ್ಚರವಾಗುವ ಬಯಕೆಯೇ ಇಲ್ಲದಿರೆ...?
ಪ್ರತಿ ಮನದ ವಿವೇಕವದು ಜಾಗೃತವಾಗಿ
ತಾಯಿ ಭಾರತಿಯ ಮೊಗದಲಾನಂದ
ಕಾಣಲು ನಾವೆಲ್ಲರೂ "ವಿವೇಕ"ರಂತಾಗಲೇ ಬೇಕು
ಉತ್ಸಾಹದುಕ್ಕಿನ ಮಾಂಸ ಖಂಡಗಳ
ಬೆಳೆಸಿಕೊಳ್ಳೋಣ ಭಾರತೀಯರೇ...
ದುಷ್ಟಸಂಹಾರಕೆ ಕೈಬೆರಳ ಮುಷ್ಟಿಯಾಗಿಸೋಣ..
ಬನ್ನಿ ದೇಶಭಕ್ತ ಬಾಂಧವರೇ...ಎದ್ದೇಳೋಣ ಬನ್ನಿ...
ಭವ್ಯ ಭಾರತ ನಿರ್ಮಾಣವೇ ನಮ್ಮ ಏಕೈಕ ಗುರಿಯೆನ್ನಿ..

---ಕೆ.ಗುರುಪ್ರಸಾದ್

ಸಿಡಿಲ ಸಂತ ವಿವೇಕಾನಂದರ ಜನ್ಮದಿನದ ಹಾರ್ದಿಕ ಶುಭಾಶಯಗಳು.... ಅವರ ವ್ಯಕ್ತಿತ್ವವನು ಪದಗಳಲಿ ಬಂಧಿಸಿಡಲು ಸಾಧ್ಯವಿಲ್ಲ ಆದರೂ ಇದು ನನ್ನ ಪಾಲಿನ ಸಣ್ಣ ನುಡಿ ನಮನ

Thursday, 26 December 2013

ಹಸಿರು...



ಅವಳ
ನೆನಪಿನ
ನದಿಯು
ನನ್ನ
ಹೃದಯದ
ಬಯಲಲಿ
ಬತ್ತದೆಯೇ.
ನೋವಿನ
ಹಸಿರೆಂತು
ಒಣಗೀತು...?