Sunday, 27 January 2013

ಅಪಾರ್ಥ...

ನಾನೇನೋ
ಹಾಗೇ ಸುಮ್ಮನೆ
ಅವಳ ಫೋಟೋಗಳನ್ನ
ಲೈಕ್ ಮಾಡುತ್ತಿದ್ದೆ ಅಷ್ಟೇ...
ಅವಳೋ ಇದ್ದಕ್ಕಿದ್ದಂತೆ
ತನ್ನ ಮದುವೆಯ
ಕರೆಯೋಲೆಯನ್ನ
ಟ್ಯಾಗ್ ಮಾಡಿಬಿಟ್ಟಳು...

ಪ್ರದರ್ಶನ...

ಗಣತಂತ್ರದ ಈ ದಿನ
ನೆರೆದ ದೇಶವಾಸಿಗಳೆದುರು,
ಬಂದ ಅತಿಥಿಗಳೆದುರು,
ಸಾಲು ಸಾಲಾಗಿ ಆಯಿತು
ನಮ್ಮ ಸೇನೆಯಲಿರುವ
ಶಸ್ತ್ರಾಸ್ತ್ರಗಳ ಪ್ರದರ್ಶನ;
ಅತ್ತ ಗಡಿಯತ್ತ ತಲೆಗಳೆರಡು
ಉರುಳಿ ಹೋದರೂ
ಬರಿಯ ತೋಳ್ಬಲವನೂ
ಪ್ರದರ್ಶಿಸಲು ಬಿಡಲಿಲ್ಲ,
ಇದೇ ತಾನೆ ಸರ್ಕಾರದ
ಹೇಡಿತನಕೆ ನಿದರ್ಶನ...?

ಹಿಡಿತ


ನನಗೇಕೋ ಅನ್ನಿಸಿತು, 
ಇತ್ತೀಚೆಗೆ ಆಗಿಲ್ಲ 
ನನ್ನ ಲೇಖನ ಹರಿತ
ಅದಕಾಗೇ.. 

ಹರಿತವಾದ ಲೇಖನಿಯ 
ಮೇಲಿದೆ ಈಗೆನ್ನ ಹಿಡಿತ

ಪರದಾಟ...

ರಾಜಿನಾಮೆ ಪತ್ರ
ಹಿಡಿದು ಹುಡುಕುತ್ತಿದ್ದಾರೆ
ಕೆಲ ಶಾಸಕರು
ವಿಧಾನಸಭೆಯ
ಮೂಲೆ ಮೂಲೆ ;
ಆದರೆ ನಮ್ಮ
ಸ್ಪೀಕರ್ರೋ...
ಆಡುತ್ತಿದ್ದಾರೆ
ಇವರೊಂದಿಗೆ
ಕಣ್ಣಾ ಮುಚ್ಚಾಲೆ

ಗಣತಂತ್ರ



ಭಾರತೀಯರಿಗೆಲ್ಲಾ
ಇಂದು ಗಣತಂತ್ರ
ರಾಜ್ಯದ ರಾಜಕಾರಣಿಗಳಿಗೆ
ಮಾತ್ರ ಇಂದು ಬಣತಂತ್ರ

Thursday, 24 January 2013

ಕೊಡುಗೆ...(ಚಿತ್ರಕ್ಕಾಗಿ ನಾಲ್ಕು ಸಾಲು)



 











ಕಠೋರ ಶಿಲೆಯ
ಒಳಹೊಕ್ಕು ಸಾರವ
ಹೀರುವುದಕಾಗಿಯೇ..
ಬೇರಿನ ಬಿಗಿಯಪ್ಪುಗೆ;
ಇಂತಹಾ ಪರಿಶ್ರಮಕೆ
ಕಾರಣ ಒಂದು ಬಯಕೆ,
ಭೂದೇವಿಯ ಉಡುಗೆಗೆ
ಹಸಿರು ಬಣ್ಣದ ಕೊಡುಗೆ.

ಸುಂದರ ಪ್ರಕೃತಿ...

ಪ್ರಕೃತಿಯ
ಬಗೆಗಿನ ನನ್ನ
ಸಾಲುಗಳೆಲ್ಲವೂ
ಸುಳ್ಳಿನ ಕಂತೆಯಲ್ಲ,
ಅವು ನನ್ನಯಾ
ಕಣ್ಣಿಗೆ ಕಂಡಿದ್ದು;
ಆದರೆ ನಾನನುಭವಿಸಿದ
ಆನಂದ ನಿಮಗಾಗಿರಲಿಕ್ಕಿಲ್ಲ
ಕಾರಣ, ವರ್ಣನೆಯ
ಪದಗಳೆಲ್ಲಾ ಬರಿಯ
ನನ್ನ ಅಲ್ಪಮತಿಯ
ಕೈಗಳಿಗೆ ಎಟಕಿದ್ದು.