Thursday, 28 February 2013

ಪ್ರೀತಿ ಮತ್ತು ಕವನ

ಪದಗಳೂ
ಅವಳಂತಾಗಿವೆ.
ಇದ್ದೂ ಇಲ್ಲದಂತೆ,
ಪ್ರೀತಿ ಎನುವ
ಕವನದಂಗಣವ
ಪ್ರವೇಶಿಸುವ
ಲಕ್ಷಣವೇ ಇಲ್ಲ

ಡೈ-ವರ್ಶನ್...

ಉಡುಪಿ ಮಂಗಳೂರಿನ
ಹೊಸ ರೋಡಿನ
ಕಾಮಗಾರಿಯಿಂದಾಗಿ
ಸಿಗುವುದು ನಮಗೆ ಅಲ್ಲಲ್ಲಿ
ಕೆಲವು ಡೈವರ್ಶನ್ನು(Diversion)
ಆದರೆ ಅಲ್ಲಾದ ಸಾವುಗಳ
ಪಟ್ಟಿ ನೋಡಿದಾಗ
ನನಗನಿಸುವುದು
ಇದು ಅಪಘಾತಕ್ಕಾಗೇ ಮಾಡಿದ
ಹೊಸ ಡೈ(Die)ವರ್ಶನ್ನು(Version)

ಫೇಸ್ ಬುಕ್ ಜೀವನ

ಜೀವನವೂ ಫೇಸ್ ಬುಕ್
ತರ ಎಂದುಕೊಂಡು
ಬಸ್ ಸ್ಟ್ಯಾಂಡಿನಲಿ
ಒಂಟಿಯಾಗಿದ್ದ ಹುಡುಗಿಯ
ನಗು ಮೊಗದ ಕಡೆ
ತೇಲಿ ಬಿಟ್ಟೆ " ಹಾಯ್ "
ಎನುವ ಸಣ್ಣ ಕಮೆಂಟು;
ಅಲ್ಲಿಂದಲೊಂದು " ಹಾಯ್ "ನ
ನಿರೀಕ್ಷೆಯಲಿದ್ದ ನನಗೆ ಸಿಕ್ಕಿದ್ದು
" ಬೇಕಾ " ಎನುವ ಹೊಸ ಕಮೆಂಟು,
ಮತ್ತೆ ಥಂಬ್ಸ್ ಅಪ್ ಸಿಂಬಲಿಗೆ ಬದಲಾಗಿ
ಕಾಣಿಸಿತು ಅವಳ ಕಾಲಿನ ಒಂದು ಮೆಟ್ಟು

ಜಿಹಾದಿ

ಸಿಡಿದ ಸಿಡಿತಲೆಗೆ
ಜೀವಗಳೊಂದಿಷ್ಟು
ಬಲಿಯಾಗಿ ಹರಿದಿದೆ
ಒಂದೆಡೆ ರಕ್ತದ ನದಿ;
ಇನ್ನೊಂದೆಡೆ
ಬಲಿಯಾದವರ ಆಪ್ತರು
ಹರಿಸುತ್ತಿದ್ದಾರೆ
ಧಾರಾಕಾರದಿ ಕಣ್ಣೀರ ನದಿ;
ಈ ನದಿಗಳಿಂದಲೇ
ದಾಹವ ತೀರಿಸುವ
ಬಯಕೆಯೇ ನಿನದು...?
ಅದೆಲ್ಲೋ ಮರೆಯಲಡಗಿರುವ
ಓ ಮತಾಂಧ ಜಿಹಾದಿ...?

ಉಡುಗೊರೆ

ಆಯಾಸದಿಂದ
ಬಳಲಿರುವ
ತನುವಿಗೆ
ಇರುಳ
ರಾಜನ
ಊಡುಗೊರೆ
ಈ ಸುಖನಿದ್ರೆ

ಹೊಸ ಭಾಸ್ಕರ

ಲೋಕ(ಆಯುಕ್ತ)ಕ್ಕೆ
ಭಾಸ್ಕರ(ರಾವ್)ನ
ಉದಯ
ಲಂಚಕೋರರೆಲ್ಲರಿಗೆ
ಈತ ಕಾಣಿಸಲಿ
ದುರ್ಗತಿಯ

ಕೆಂದುಟಿ...??

ತುಟಿಯ ಬೆಸೆದು
ಕೆಂಪಗಾಗಿಸುವೆಯಾ ನಲ್ಲೆ
ಎಂದು ಪಿಸುಗುಟ್ಟಿದ
ಪ್ರಿಯತಮ ಅತ್ತಿತ್ತ
ಹುಡುಕತೊಡಗಿದ
ಪಾರ್ಕಿನಲೊಂದು ಪೊದೆ ;
ಬರಿಯ ತುಟಿಯಷ್ಟೇ ಅಲ್ಲ
ಪೂರ್ತಿ ಮುಖವೀಗ
ಕೆಂಪು ಕೆಂಪು;
ಕಾರಣ... ಸಿಕ್ಕಿತಲ್ಲ
ನೈತಿಕ ಪೋಲೀಸರಿಂದ
ಹಿಗ್ಗಾ ಮುಗ್ಗಾ ಒದೆ