Thursday 28 February, 2013

ಜಿಹಾದಿ

ಸಿಡಿದ ಸಿಡಿತಲೆಗೆ
ಜೀವಗಳೊಂದಿಷ್ಟು
ಬಲಿಯಾಗಿ ಹರಿದಿದೆ
ಒಂದೆಡೆ ರಕ್ತದ ನದಿ;
ಇನ್ನೊಂದೆಡೆ
ಬಲಿಯಾದವರ ಆಪ್ತರು
ಹರಿಸುತ್ತಿದ್ದಾರೆ
ಧಾರಾಕಾರದಿ ಕಣ್ಣೀರ ನದಿ;
ಈ ನದಿಗಳಿಂದಲೇ
ದಾಹವ ತೀರಿಸುವ
ಬಯಕೆಯೇ ನಿನದು...?
ಅದೆಲ್ಲೋ ಮರೆಯಲಡಗಿರುವ
ಓ ಮತಾಂಧ ಜಿಹಾದಿ...?

No comments:

Post a Comment