Thursday, 7 February 2013

ಮಾಯ



ಆಗಸದ ತುತ್ತತುದಿಯಿಂದ
ಬುವಿಯೆಡೆಗೆ ಉರುಳಿ
ಜಾರಿದುದರಿಂದಲಾಯಿತು
ರವಿಯ ಮೈಯಲ್ಲಿ ಕೆಂಪು ಗಾಯ;
ಆ ಗಾಯದ ಉರಿಯ
ನೋವ ತಣಿಸಿಕೊಳಲೆಂದು
ಕಡಲ ನೀರಿಗಿಳಿದವ, ಅಲ್ಲಿಯೂ ಜಾರಿ
ಕಡಲೊಳಗೆ ಮುಳುಗಿ ಮಾಯ

No comments:

Post a Comment