Wednesday 13 February, 2013

ಇದೆಂಥಾ ಘೋರ ಅನ್ಯಾಯ...



ದೇಶದಾ ಹೃದಯವನೇ ಸುಡಲೆಂದು ಬಂದವನ
ದಶಕಗಳ ಕಾಲ ಪೋಷಿಸಿತು ಸರ್ಕಾರ ಜೈಲಿನಲಿ
ಸರ್ವೋಚ್ಛ ನ್ಯಾಯಲಯವೇ ತೀರ್ಮಾನಿಸಿದ ಉಗ್ರನಿಗೆ
ತಡವಾಗಿಯಾದರೂ ಶಿಕ್ಷೆ ಜಾರಿಯಾಯಿತು, ಗುಪ್ತ ರೀತಿಯಲಿ

ಅಂದು ಹೋರಾಡಿ ವೀರಮರಣವನಪ್ಪಿದ ಜನರ ಬಂಧುಗಳ ಸಂತೃಪ್ತಿಗೊಳಿಸಬೇಕಿತ್ತು,
ಮುಚ್ಚುಮರೆಯಿರದೆ ಉಗ್ರನನು ತೆರೆದ ಮೈದಾನದಲಿ ಗಲ್ಲಿಗೇರಿಸಿ,
ಆದರೆಂಥಾ ವಿಪರ್ಯಾಸ... ಸಂಭ್ರಮಿಸಿದವರನೆಲ್ಲಾ ದೂರುತಿದೆ ಮಾಧ್ಯಮ
ಪ್ರಚೋದಿಸುತಿಹರಿವರೆನುವ ಮಾತನು ಪದೇ ಪದೇ ಬಿತ್ತರಿಸಿ.

ಇದೆಂಥಾ ಇಬ್ಬಗೆಯ ನೀತಿ, ಅಸುರನಂತವನ ಮರಣಕೆ ಸಂಭ್ರಮಿಸುವುದು ತಪ್ಪಂತೆ,
ಆದರತ್ತ ಉಗ್ರನ ಬಹಿರಂಗವಾಗಿ ಬೆಂಬಲಿಸಿದವರ ದೇಶನಿಷ್ಠೆಯನು ಕೇಳುವವರಾರಿಲ್ಲ..
ತುತ್ತುಣಿಸಿದ ತಾಯಿ ಭಾರತಿಯ ಮಡಿಲಲ್ಲೇ ಕುಳಿತು ಬೆನ್ನಿಗೆ ಚೂರಿ ಹಾಕುವವರ ಮರೆಗಿರಿಸಿ
ದೇಶಸೇವೆಯನೇ ವೃತ್ತಿಯಾಗಿಸಿದವರನು ಭಯೋತ್ಪಾದಕರೆಂದು ಜರೆಯುವರಲ್ಲ

No comments:

Post a Comment