Thursday, 5 June 2014

ಚಿಗುರು...


ಒಣಗಿದಂತಿದ್ದ ಮರಗಳಲ್ಲೂ
ಹಸಿರು ಚಿಗುರುತಿದೆ
ಕಾರಣ "ಯುಗಾದಿ ",
ಬಳಲಿದ ಭಾರತೀಯನ
ಎದೆಯಲ್ಲೂ ಹೊಸ ಆಸೆ
ಚಿಗುರುತಿದೆ..
ಕಾರಣ " ನರೇಂದ್ರ ಮೋದಿ "

ಬೇವು ಬೆಲ್ಲ



ನಿನ್ನ ಸವಿನೆನಪಿನ
ಬೆಲ್ಲದ ಸಿಹಿಯ
ಚಪ್ಪರಿಸಿ ಮೆಲ್ಲನೆ
ಕಣ್ತೆರೆದಾಗ
ನನ್ನೆದುರಿಗಿದ್ದಿದ್ದು
ನೀ ನನ್ನವಳಲ್ಲ
ಎನುವ ಕಹಿ
ಸತ್ಯದ ಬೇವು

ಫೂಲ್...


ಬೇಡ ಗೆಳತೀ..
ಇದೊಂದು ದಿನ
ಕನಸಲ್ಲಿ ಬಾರದಿರು...
ನಗುತ್ತಾ ಬಂದು
ಈ ದಿನಕೆ
ಶುಭಾಶಯವ ಕೋರಿ
ಹಿಂತಿರುಗದಿರು..

ಮುತ್ತು


ವಸುಧೆಯು
ಆ ಬದಿಯ
ಕೆನ್ನೆಯಲೊಂದಿಷ್ಟು
ಪಡೆದು ಮುಖ
ತಿರುಗಿಸಲು....
ಬಸವಳಿಯದ
ನೇಸರ...
ಈ ಬದಿಯ ಕೆನ್ನೆಗೂ
ಬೆಳಕಿನ ಮುತ್ತನು
ಕೊಡತೊಡಗಿದ.

ಯಂಗ್-ಏಜು


ರಿಲೇಶನ್ ಶಿಪ್
ಸ್ಟೇಟಸ್
ನೋಡಿದಾಗ
ಅನಿಸುತ್ತದೆ...
ಈಗ ಹೆಚ್ಚಿನ
ಯುವಕ
ಯುವತಿಯರು
ಯಂಗ್-ಏಜಿನಲೇ
ಎಂಗೇಜು...

ಭಯ ಮತ್ತು ನಗು...


ನುಂಗಿದ ಹಣ್ಣಿನ
ಜೊತೆಯಲಿದ್ದ
ಬೀಜವೊಂದು,
ಹೊಟ್ಟೆಯೊಳಗೇ
ಬೆಳೆದು ಮರವಾಗಿ,
ಕಿವಿಯ ತೂತಿನ
ಮೂಲಕ ಕೊಂಬೆ
ಹೊರಬರುವ..
ವಿಚಿತ್ರ ಕಲ್ಪನೆ
ಬಾಲ್ಯದಲಿ
ಭಯವ ತರುತಿತ್ತು.
ಆದರೀಗ ಅದರ ನೆನಪು
ಇನ್ನಿಲ್ಲದ ನಗುವ
ತರಿಸುತಿದೆ.

ಕಪಾಳಮೋಕ್ಷ


ಕೇಜ್ರಿವಾಲು
ಜನರ ಬಳಿ
ಕೇಳಿದ್ದು ವೋಟು ;
ಆದರೆ ಪಾಪ
ಸಿಗ್ತಾ ಇರೋದು
ಕೆನ್ನೆಗೆ ಏಟು.