Monday, 25 August 2014

ಸ್ನೇಹ....



ಬಾಲ್ಯದಲಿ
ಒಬ್ಬರ
ಹೆಗಲ
ಮೇಲೊಬ್ಬರು
ಕೈ ಹಾಕಿ
ನಡೆಯುವುದೇ
ಗಾಢ
ಸ್ನೇಹದ
ಕುರುಹು...

ವರ್ಕ್...



ಮೊದಲೆಲ್ಲಾ
ಯುವಜನತೆ..
ಚಿಂತೆಗೀಡಾಗುತ್ತಿದ್ದರು
ಸಿಗದಿದ್ದಾಗ "ವರ್ಕು "
ಇಂದು ಯುವಜನತೆ
ಚಿಂತೆಗೀಡಾಗುತ್ತಾರೆ
ಸಿಗದಿದ್ದಾಗ " ನೆಟ್ ವರ್ಕು

ನಾಗರ ಪಂಚಮಿ



ಬುಸುಗುಟ್ಟುವ
ಮಡದಿ
ಮನೆಯಲಿರಲು
ನಿತ್ಯವೂ
ನಾಗರ ಪಂಚಮಿಯೇ...

ಹೊಣೆ..



ನನ್ನ ಕಣ್ ಕಡಲ
ನೀರಿನುಬ್ಬರ ಇಳಿತಕೆ
ಅವಳ ನೆನಪಿನ
ಚಂದಿರನ ಗಾತ್ರವೇ
ನೇರ ಹೊಣೆ...

ಕರೆ....



ಕೇಳಿಸಲಿಲ್ಲವೆಂದು...
ಗಮನಕೊಡದೆ
ಸುಮ್ಮನಿರುವಂತಿಲ್ಲ...
ಯಮನ ಕೂಗಿಗೆ
ಓಗೊಡಲೇಬೇಕು...
ಸಂಬಂಧಗಳ
ಕೊಂಡಿಗಳನೆಲ್ಲಾ
ಕಳಚಿಕೊಂಡು
ಅವನೆಸೆವ ಪಾಶಕೆ
ಕೊರಳನೊಡ್ಡಲೇಬೇಕು...

ಸಾಂತ್ವಾನ....



ನಾನೇನೂ ಸಾಂತ್ವಾನದ
ಮಾತುಗಳನಾಡದೇ ಹೋದೆ...
ಪತಿಯ ಕಳೆದುಕೊಂಡ
ನನ್ನಕ್ಕನ ಕಣ್ಣೀರಿಗೆ
ಅಣೆಕಟ್ಟನು ಕಟ್ಟಲಾರದೆ
ಅಸಹಾಯಕನಾಗಿ ನಾ ನಿಂತು ಬಿಟ್ಟೆ...

ಮನದಾಳದ ತುಂಬಾ
ತಡಕಾಡುತಲಿದ್ದೆ...
" ನಾನೇಕೆ ಬದುಕಲಿ...? "
ಎನುವ ಅವಳ ಪ್ರಶ್ನೆಗೆ
ಉತ್ತರವಾಗಬಲ್ಲ ಶಬ್ದಗಳೇನಾದರೂ
ಸಿಕ್ಕೀತೆ....?
ಎನುವ ಆಸೆಯಿಂದ...
ಅಲ್ಲೂ ನಿರಾಸೆ,
ನಾ ಮತ್ತೊಮ್ಮೆ ಸೋತು ಹೋದೆ.

ಬಲು ದಿಟ್ಟೆ ನನ್ನಕ್ಕ
ಕಷ್ಟಗಳಿಗಂಜುವವಳಲ್ಲ...
ನನ್ನ ಜೀವನದ ಹಾದಿಯಲೇ
ಏಕೆ ಇಷ್ಟೊಂದು ಮುಳ್ಳುಗಳೆಂದಾಗ
ಉತ್ತರವ ಕೊಡಲಾಗದೇ
ತಡವರಿಸುತ್ತಲೇ ಇದ್ದೆ...

ನಿನ್ನಾಟವ ನಿಲ್ಲಿಸೆಂದು
ನಾನೆಂದೂ ಗೋಗರೆಯುವುದಿಲ್ಲ,
ನಿನ್ನ ಜರೆಯುವುದಿಲ್ಲ,
ಹೇ ಭಗವಂತ...
ನೊಂದ ನನ್ನವರ
ಸಂತೈಸುವ ಶಕ್ತಿ ಕೊಡು...
ಎಂದಷ್ಟೇ ಅಂಗಲಾಚುತ್ತೇನೆ...
ಎಂದಷ್ಟೇ ಅಂಗಲಾಚುತ್ತೇನೆ...

ಭ್ರಮೆ....



ಜೀವನದ
ಪ್ರವಾಹದಲ್ಲಿ
ನಮ್ಮನ್ನೆಲ್ಲಾ
ಕೊಚ್ಚಿಕೊಂಡು
ಹೋಗುವಂತೆ
ತೇಲಿಬಿಟ್ಟಿದ್ದಾನೆ
ಭಗವಂತ...
ನಮಗೋ
ಈಜುತ್ತಿದ್ದೇವೆ
ಎನ್ನುವ ಭ್ರಮೆ...