Friday, 27 May 2016

ರಹಸ್ಯ



ಅಯ್ಯೋ...
ಕವಿತೆಗಳೆನುವ
ನವ ತರುಣಿಯರಿಗೆ
ತಿಳಿದು ಬಿಟ್ಟಿತೇನೋ...?
.
.
.
.
.
.
ನಾ ಮದುವೆಯಾದ
" ಅಂಕಲ್ " ಎಂದು
ಯಾರೊಬ್ಬರೂ
ನನ್ನ ಬಳಿಯೇ
ಸುಳಿಯುತ್ತಿಲ್ಲ

ಬರ - ಆನಂದ



ಹಲವಾರು ದಿನಗಳಿಂದ
ನಾ ನನ್ನ ಮನದ ಕತ್ತನು
ಕೆಳಕ್ಕೆ ಬಾಗಿಸಿಲ್ಲ.
ಆ ಮನದ ಕಂಗಳು
ನೆಟ್ಟಿರುವುದು
ಯೋಚನೆಯಾಗಸದಲ್ಲಿ
ಆ ಆಸೆಕಂಗಳ
ನೇರ ಹುಡುಕಾಟ
ಪದಗಳೆನುವ ಮಳೆಹನಿ
ಆ ಮಳೆಹನಿಯ
ಬರುವಿಕೆಯ ಕಾಯುವಿಕೆಗೆ
ಕಾರಣ...
ಪದಗಳ ತೇವವಿರದೆ
ಬಿರುಕು ಬಿಟ್ಟಂತಾದ
ತುಂಡು ಕಾಗದದ
ಬರಡು ಭೂಮಿ.
ಪದಗಳುರುಳಬೇಕು ಅಲ್ಲಿಂದ
ಕವನದಾ ಸಣ್ಣ ಸಣ್ಣ
ಗಿಡಗಳು ಮೊಳೆಯಬೇಕು
ಆ ಬುವಿಯಿಂದ...
ಆಗಲೇ ನನಗಾನಂದ
ಆಗಲೇ ನನಗಾನಂದ

ಉಪವಾಸ



ನಿನ್ನೆ ರಾತ್ರಿ
ಜಾಗರಣೆ...
ಆ ಜಾಗರಣೆಯಿಂದಾಗಿ
ಮನಸಿನುದರಕೆ
ಅವಳ ಕನಸಿರದ
ವಿಶೇಷ ಉಪವಾಸ

ಅಕಾಶವಾಣಿ


ಗೆಳತೀ..
ನಿನ್ನ ಬಗೆಗಿನ
ಭಾವನೆಗಳ
ಮನಬಿಚ್ಚಿ
ಅಕಾಶವಾಣಿಯಲಿ
ಹೇಳಿ ಬಂದಿರುವೆ..
ಕೇಳಲು ಮರೆಯದಿರು
ಎಂದು ಅವಳ
ಬಳಿ ಹೇಳಿದ್ದೆ...
ಅವಳು ಕಿವಿಗೊಟ್ಟು
ಕಾದಿದ್ದೇ ಬಂತು..
.
.
.
ನಮ್ ಹಣೆಬರಹ
ಕವನ ಪ್ರಸಾರ
ಆಗಲೇ ಇಲ್ಲ..
ಪ್ರೀತಿಯ ನಂಟು
ಅಂಟಲೇ ಇಲ್ಲ..
ಹಾಳಾದ್ದು..
ಅವಳೀಗ
ಫೋನು ಕೂಡಾ
ತೆಗಿಯುತ್ತಿಲ್ಲ.

ಯಾಕೆ...??


ಅವಳ
ಪ್ರತಿಯೊಂದು
ನೆನಪುಗಳ
ಹೊರಗೋಡಿಸಿಬಿಟ್ಟಿದ್ದೆ;
ನಿರಾಳವಾಗಿ
ನಿದಿರೆಗಾಗಿ
ಕಣ್ಣಿನ ಕದವ
ಮುಚ್ಚಿಬಿಟ್ಟಿದ್ದೆ,
ಆದರೆ...
ನಿದಿರಾ ದೇವಿಯು
ತಾನೊಬ್ಬಳೇ
ಬರದೆ
ತನ್ನೊಡನೆ
ಅವಳ
ಕನಸುಗಳನ್ನೂ
ಕರೆತಂದಿದ್ದಾದರೂ
ಯಾಕೆ...??

ಅಸೂಯೆ



ಬಿಡದಂತೆ
ಅವಳ
ದುಂಡು
ಕೆನ್ನೆಗೆ
ಅಂಟಿಕೊಂಡಿದ್ದ
ಬಣ್ಣವ
ಕಂಡಾಗ
ನನಗೇತಕೆ
ಆಗುತಿದೆ
ಅಸೂಯೆ ,...?

ಬಣ್ಣ



ಗೆಳತೀ
ಹೇಳೀ ಕೇಳೀ
ನನಗೆಲ್ಲಿಯ
ಹೋಳಿ...?
ಬಣ್ಣಗಳ
ಹಂಗೆನಗಿಲ್ಲ
ನೀ ತೊರೆದು
ಹೋದ
ಬಾಳಿಗೆಲ್ಲಿಯ ಬಣ್ಣ
ಅದು ಹರಿಸುವ
ಕಣ್ಣೀರ ಪಿಚಕಾರಿಗೂ
ಇರುವುದಿಲ್ಲ ಬಣ್ಣ