Friday 27 May, 2016

ಬರ - ಆನಂದ



ಹಲವಾರು ದಿನಗಳಿಂದ
ನಾ ನನ್ನ ಮನದ ಕತ್ತನು
ಕೆಳಕ್ಕೆ ಬಾಗಿಸಿಲ್ಲ.
ಆ ಮನದ ಕಂಗಳು
ನೆಟ್ಟಿರುವುದು
ಯೋಚನೆಯಾಗಸದಲ್ಲಿ
ಆ ಆಸೆಕಂಗಳ
ನೇರ ಹುಡುಕಾಟ
ಪದಗಳೆನುವ ಮಳೆಹನಿ
ಆ ಮಳೆಹನಿಯ
ಬರುವಿಕೆಯ ಕಾಯುವಿಕೆಗೆ
ಕಾರಣ...
ಪದಗಳ ತೇವವಿರದೆ
ಬಿರುಕು ಬಿಟ್ಟಂತಾದ
ತುಂಡು ಕಾಗದದ
ಬರಡು ಭೂಮಿ.
ಪದಗಳುರುಳಬೇಕು ಅಲ್ಲಿಂದ
ಕವನದಾ ಸಣ್ಣ ಸಣ್ಣ
ಗಿಡಗಳು ಮೊಳೆಯಬೇಕು
ಆ ಬುವಿಯಿಂದ...
ಆಗಲೇ ನನಗಾನಂದ
ಆಗಲೇ ನನಗಾನಂದ

No comments:

Post a Comment