Friday 27 May, 2016

ಕರ್ಮ ಫಲ



ಬದುಕೇ ಹೀಗೆ....
ಇಲ್ಲಿ ಉಳುಮೆಯ ಕೆಲಸ
ಆಗಲೇ ಬೇಕು...
ಕರ್ಮದ ಬಿತ್ತನೆಗೆ
ಫಲ ಇದ್ದೇ ಇದೆ..
ಅದಾವುದ ಬೆಳೆಯುವೆವೋ
ಸಿಗುವುದದರದ್ದೇ ಫಲ...
ಭಗವಂತನ ಕೃಪಾದೃಷ್ಟಿಯ
ಮಳೆಯ ಬಗೆಗೆ ಸಂದೇಹವಿಲ್ಲ,
ತೊಂದರೆಯೆಂದರೆ ಬರಿಯ
ಪೂರ್ವ ಸುಕೃತದ
ಕೀಟಗಳದು ಅಥವಾ ಪಶುಪಕ್ಷಿಗಳದು
ಬೆಳೆಯ ತಿಂದೀತೋ... ?
ಅಥವಾ ಕಳೆಯ ತಿಂದು
ಬೆಳೆಯ ಬೆಳೆಸೀತೋ....?
ಎನ್ನುವುದರರಿವು ಯಾರಿಗೂ ಇಲ್ಲ.
ಕಾಯಬೇಕು....
ಫಲ ಸಿಗುವ ಮುನ್ನವೇ
ಉಸಿರು ನಿಂತರೂ
ಕಳವಳ ಪಡಬೇಕಾಗಿಲ್ಲ...
ಮತ್ತವು ಬರುವುದು
ಮುಂದಿನ ಜೀವನದುಳುಮೆಯ
ಬೆಳೆಗಳ ಹಾಳುಗೆಡವಲೋ...
ಅಥವಾ ಉಳಿಸಿ ಬೆಳೆಸಲೋ...?

No comments:

Post a Comment