Monday 8 October, 2012

ಕಾವ್ಯೋದಯ

ಸಮಯಕ್ಕೆ ಸರಿಯಾಗಿ
ರವಿಯೇನೋ
ಕಡಲ ತೊರೆದು
ಮೇಲೇರಿ ಬಂದು ಬಿಟ್ಟ,
ಆದರೆ, ಅವನಾಗಮನದ
ಸೊಬಗ ಬಣ್ಣಿಸುವ
ಕವನ ಮಾತ್ರ
ನನ್ನ ಮನದ ಕಡಲೊಳಗೇ
ಉಳಿದುಕೊಂಡಿದೆ,
ಕಾಗದದ ಬಾನ ಬೆಳಗೋ
ಲಕ್ಷಣವೇ ಕಾಣದಾಗಿದೆ.

No comments:

Post a Comment