Monday 8 October, 2012

ಇದೆಂಥಾ ನ್ಯಾಯ...?

ಸಂತಸದ ನಗುವಿನ
ಸರಮಾಲೆ ಇದ್ದಾಗ
ಬರುವುದಿಲ್ಲ ಪರಮಾತ್ಮ
ನಮ್ಮ ನೆನಪಿನ
ಪರಿಧಿಯೊಳಗೆ;
ದುಃಖದ ಮೋಡ
ಆವರಿಸಿ ಕಣ್ಣಿಂದ
ಒಂದು ಕಣ್ಣೀರ ಹನಿ
ಹೊರ ಬಿದ್ದೊಡನೆ
ಭಗವಂತ ದೂರುಗಳ
ಕಟಕಟೆಯೊಳಗೆ.

No comments:

Post a Comment