Tuesday, 29 July 2014

ಬಲಾತ್ಕಾರ...



ಅದೆಲ್ಲೋ ದೂರದಲ್ಲಿ,
ಬಣ್ಣಗಳ ಲೋಕದಲ್ಲಿ,
ಹಣ ಮತ್ತು ಹೆಸರಿನ
ಗಳಿಕೆಗಾಗಿ ,
ಬಟ್ಟೆಯ ಬಿಚ್ಚುತ್ತಿದ್ದ
ಒಂದಷ್ಟು ಜನ
ಹೆಣ್ಣು ಮಕ್ಕಳಿಗೆ;
ತಾವೇ ಹಚ್ಚಿದ
ಈ ಕಿಚ್ಚು ಇನ್ನೆಲ್ಲೋ
ಹೆಣ್ಣು ಕುಲದ
ಅಮಾಯಕರ
ಸುಟ್ಟು ಬಿಟ್ಟೀತೆನುವ
ಪ್ರಜ್ಞೆಯೇ ಇದ್ದಿರಲಿಲ್ಲ.

ಬೆಂಬಲ



ಹಿರಿದು ಕತ್ತಿಯ
ಕತ್ತರಿಸಿಬಿಡಿ ಹೆಂಗೆಳೆಯರೇ
ಕಾಮುಕರ ಕುತ್ತಿಗೆಯ,
ಇದೆಯಿದಕೆ ನನ್ನ ಬೆಂಬಲ;
ಆದರದೇ ಕತ್ತಿಯಂಚಲಿರಲಿ
ತೆವಲಿಗಾಗಿ ಬಟ್ಟೆ ಬಿಚ್ಚುವ
ನಟೀಮಣಿಯರ ಕುತ್ತಿಗೆ,
ಇದು ನನ್ನ ಹಂಬಲ.

ಕೂಸು ...



ಕೆನ್ನಯ ತುಂಬಾ
ನೀರ ಹನಿಗಳು....
ಅವುಗಳಲಿ
ಮೋಡದ
ಕೂಸುಗಳು
ಬರಿಯ
ಬೆರಳೆಣಿಕೆಯಷ್ಟೇ,
ಮತ್ತೆಲ್ಲವನೂ
ಹೊತ್ತು ಹೆತ್ತಿದ್ದು
ನನ್ನೀ ಕಂಗಳೇ...

ನಾಚಿಕೆ



ನೇಸರನಿಗೂ
ನಾಚಿಕೆಯೇನೋ
ಕಾಣಿಸುತ್ತಿಲ್ಲ
ಕಣ್ಣಿಗೆ ....
ಮಳೆರಾಯನು
ಬುವಿಯ ಬಿಡದೇ
ಮುತ್ತಿಡುವ
ಈ ರೀತಿಗೆ....

ಕೇಕು



ಗೆಳತೀ
ಚೂರಿಯೊಂದನು
ಕೈಯಲ್ಲಿಟ್ಟು
ಒಳಹೋದಾಗ
ಕೇಕಿನ
ನಿರೀಕ್ಷೆಯಲ್ಲಿದ್ದೆ
.
.
.
.
.
ನೀ ಮಾಮೂಲಿಯಂತೆ
ನೀರುಳ್ಳಿಯನ್ನೇ ತರೋದೇ...?

ಕಳ್ಳ



ಮೇಘರಾಜ
ಬುವಿಯ
ಮೇಲೆ ಸುರಿಸಿದ
ಮಳೆ ನೀರ
ಮುತ್ತುಗಳನು..
ರವಿ ಮೆಲ್ಲಗೆ
ಮೋಡದ
ಮರೆಯಿಂದಲೇ
ಒಂದೊಂದಾಗಿ
ಕದಿಯುತ್ತಿದ್ದಾನೆ.

ಲೇಡಿ ಡಾಕ್ಟರ್...


ಅವಳ ನಗುವಿನ
ಸೂಜಿ ಮನದಾಳಕೆ
ಇಳಿಯುತ್ತಿದ್ದಂತೆ
ನಾ ನನ್ನೂರ
ಬಿಟ್ಟು ಕನಸಲಿ
ಅವಳ ಜೊತೆ
ಸುತ್ತತೊಡಗಿದೆ ಸಿಡ್ನಿ...
.
.
.
.
.
.

ಈಗ ನನಗೊಂದೇ ಕಿಡ್ನಿ