Wednesday 14 December, 2011

ತಪೋಭಂಗ

ಮುಸ್ಸಂಜೆಯ ಹೊತ್ತಲ್ಲಿ
ಘೋರ ತಪಸ್ಸು 
ಮಾಡಲು ಕುಳಿತೆ;
ಉದ್ದೇಶ ಇಂದ್ರನ
ದೇವಲೋಕದ ಸಿಂಹಾಸನ,
ಮನದೊಳಗೊಳಗೆ
ಇನ್ನೊಂದು ಆಸೆಯಿತ್ತು.
ನನ್ನ ತಪವ ಭಂಗಗೊಳಿಸಲು
ರಂಬೆ,ಮೇನಕೆಯರ
ಇಂದ್ರ ಕಳುಹಿಸುವನಲ್ಲ;
ಅವರ ಸೌಂದರ್ಯವನು 
ನಾ ಆಸ್ವಾದಿಸಬಹುದಲ್ಲ.
ದೂರ್ವಾಸರ ಕೋಪವೀಗ
ಇಂದ್ರನ ಮೇಲೆ
ಬರಿಯ ಸೊಳ್ಳೆಗಳ ಕಳಿಸಿ
ನನ್ನ ತಪವ ಭಂಗಗೊಳಿಸಿದನಲ್ಲ...

No comments:

Post a Comment