Monday 27 February, 2012



ಕಟ್ಟು ಮಸ್ತಾದ ದೇಹ, 
ಕಣ್ಣೊಳಗೆ ಸ್ವಾತಂತ್ರ್ಯದ ಕನಸು
ಮನದೊಳಗೆ ಸದಾ ಕ್ರಾಂತಿಯ ಜ್ವಾಲಾಮುಖಿ
ಮೆದುಳಿನಲಿ ನೂರಾರು ಯೋಜನೆಗಳು
ಆಂಗ್ಲ ಜನರ ಹುಟ್ಟಡಗಿಸುವ ಯೋಚನೆಗಳು
ಇವರ ಗರಡಿಯಲೇ ಬೆಳೆದು ನಿಂತರು
ಭಗತಸಿಂಗರಂತಾ ಕ್ರಾಂತಿಕಾರಿಗಳು
ಆಂಗ್ಲ ಸಿಪಾಯಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಾ
ಬೀಗುತ್ತಿದ್ದರು ತನ್ನ ಮೀಸೆಯನು ತಿರುವುತ್ತಾ
ಬಿಳಿಯರ ಕೈಗೆ ಸಿಗಲಾರೆ ಎನುವ ಮಾತನುಳಿಸುವ ಸಲುವಾಗಿ
ತನ್ನ ತಾನೆ ಹತ್ಯೆಗೈದವರಿವರು
ತಾಯಿ ಭಾರತಿಗೆ ತನ್ನ ನೆತ್ತರನೇ ಅರ್ಪಿಸಿದರಿವರು
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದರಿವರು

ಅಪ್ರತಿಮ ದೇಶಭಕ್ತ  ಚಂದ್ರಶೇಖರ ಆಜಾದರಿಗೆ ನನ್ನ ಸಣ್ಣ ನುಡಿ ನಮನ

No comments:

Post a Comment