Sunday 15 July, 2012

ಪಶ್ಚಿಮದ ಪ್ರವಾಹ..


ಭರತ ಖಂಡದಲೀಗ ಹೊಸತೊಂದು ಹುಚ್ಚು ಪ್ರವಾಹ
ಪಶ್ಚಿಮದ ಸಂಸ್ಕೃತಿಯನೇ ಅನುಸರಿಸುವ ಹುಚ್ಚು ವ್ಯಾಮೋಹ.
ಯುವಜನತೆಗಂತೂ ಈ ಪ್ರವಾಹದಲೇ ಕೊಚ್ಚಿ ಹೋಗುವಾಸೆ,
ಜಗದ ಮೊದಲ ಭವ್ಯ ಸಂಸ್ಕೃತಿಯ ನುಚ್ಚುನೂರುಮಾಡುವಾಸೆ.

ಉಡುಗೆಯೂ ಅವರದೇ... ಅಡುಗೆಯೂ ಅವರದೇ...
ಆಡುವ ನುಡಿಯಂತೂ ಅವರದೇ ಆಗಿ ಹೋಗಿದೆ.
ಕಟ್ಟುಪಾಡಿನ ಆಚರಣೆಗಳೆಲ್ಲವೂ ಮುಢನಂಬಿಕೆಗಳಂತೆ,
ಹುಚ್ಚು ಮಾತನಾಡುತಿಹರು, ಆಚರಣೆಯ ತಿರುಳನರಿಯದೆ.

ಶತಮಾನದ ಬಿರುಗಾಳಿಗುರುಳದೇ ಇದು ನಿಂತಿರುವುದು
ನಮ್ಮತನದ ತಾಯಿಬೇರು ಬೀಡು ಬಿಟ್ಟಿರುವ ಆಳದಿಂದ.
ಅದನೇ ಕಿತ್ತೊಗೆದು ಬಿಡುವ ಹುಚ್ಚು ಕೆಲಸವ ಮಾಡುತಿಹರು
ತಪ್ಪು ಹಾದಿಯ ತುಳಿದಿರುವ ಜನ, ತಮ್ಮ ಅಜ್ಞಾನದ ಪರಮಾವಧಿಯಿಂದ

ಆಗಸದ ಸೂರ್ಯನನು ನೋಡಿ ಎಚ್ಚರಗೊಳ್ಳಿರಿ ಭಾರತೀಯರೇ..
ಪೂರ್ವದ ಹಾದಿಯಲಿರಲು ಮಾತ್ರ ಅವನ ಬೆಳಕು ಪ್ರಖರ.
ಪಶ್ಚಿಮದ ಹಾದಿಯನು ತುಳಿದಂತೆಲ್ಲಾ ಮಂದನಾಗುವನವನು
ಮತ್ತೂ ಮುಂದುವರಿದರೆ ಮುಳುಗಿಸಿ ಬಿಡುವುದವನನು ವಿನಾಶವೆಂಬ ಸಾಗರ.

No comments:

Post a Comment