Saturday, 28 July 2012

ವಿಜಯ ದಿನ



ಕಾರ್ಗಿಲ್ಲೆನುವ
ಪರ್ವತ ತುದಿಯ
ಕೊರೆವ ಚಳಿಯಲ್ಲಿ,
ಹೃದಯದೊಳಗಿನ
ದೇಶಪ್ರೇಮದ ಕಿಚ್ಚನ್ನೇ
ದೇಹಕ್ಕೆ ಬೆಚ್ಚಗಿನ
ಬಟ್ಟೆಯನ್ನಾಗಿಸಿ,
ತಾಯಿ ಭಾರತಿಯ
ಮಾನ ರಕ್ಷಣೆಗಾಗಿ
ಕೆಚ್ಚೆದೆಯ ಮುಂದಿರಿಸಿ,
ನೆರೆಯ ಮತಾಂಧ
ದೇಶದ ಸೈನಿಕರ
ಕೊಚ್ಚಿಕೊಂದು ಹಾಕಿ,
ವಿಜಯಮಾಲೆಯ
ಭಾರತಾಂಬೆಯ
ಕೊರಳಿನ ಅಮೂಲ್ಯ
ಹಾರವನ್ನಾಗಿಸಿದ
ಭಾರತದ ಧೀರ ಯೋದರಿಗೆ
ನನ್ನ ನುಡಿ ನಮನ

No comments:

Post a Comment