ಪದಗಳೇಕೋ ಮುನಿಸಿಕೊಂಡಿವೆ
ಹೊರಬರದೇ ಒಳಗೆಲ್ಲೋ ಅವಿತುಕೊಂಡಿವೆ
ಕಲ್ಪನೆಯ ಕಡಲಲ್ಲಿ
ಕವಿತೆಗಳೆನುವ ಅಲೆಗಳು
ನಿರಂತರವಾಗಿ ಕಾಗದದ
ದಡಕೆ ಬರಬಹುದೆಂದುಕೊಂಡಿದ್ದೆ,
ಕಣ್ ತೆರೆದು ನೋಡಿದರೆ
ನನ್ನೊಳಗಿದ್ದುದು ಪದಗಳ ಸಣ್ಣಕೊಳ
ಕವಿತೆಯ ದಾಹದಲಿ ಬಂದವರಿಗೆ
ಗುಟುಕು ನೀರನ್ನಷ್ಟೇ ಕೊಟ್ಟಿರುವೆ.
ತೇವವಿರದೆ ಬಿರುಕು ಬಿಟ್ಟ
ನೆಲವನೀಗ ಕಂಡೊಡನೆ
ಸುಮ್ಮನೆ ಕೈಯ ಕಟ್ಟಿ ಕುಳಿತಿರುವೆ,
ನನ್ನಳುವಿನಿಂದಲೇ ಬರಡು
ಭೂಮಿಯ ಹಸನಾಗಿಸಬೇಕೆಂದಿರುವೆ.
ಇದು ಅದ್ಬುತ ಕಲ್ಪನೆ .. ಕಡಲ ಕವಿಯ ಒಡಲಾಳದ ಮಾತುಗಳು ... ಅತೀ ಸೊಗಸು.. :)
ReplyDelete