maunada mathu
Tuesday, 1 May 2012
ಸವಾಲು
ಕಾರ್ಮುಗಿಲುಗಳೊಂದಾಗಿ
ಸೂರ್ಯನನೆ ಮರೆಮಾಚಿರಲು
ಜಗವನಾವರಿಸಿತು
ರವಿಯಿರದ ಸಮಯದಂತಾ ಕತ್ತಲು,
ಮತ್ತೆ ತಮ್ಮೊಳಗೆ ತಾವೆ
ಕಚ್ಚಾಡಿ, ಸಿಡಿಲ ಸಿಡಿಸಲು
ಭುವಿಯನಾವರಿಸಿತು
ರವಿಯಿರುವ ಸಮಯದಂತಾ ಹೊನಲು,
ಅಬ್ಬಾ..! ನೀರಹನಿಗಳಿಂದಾದ
ಈ ಕಪ್ಪಗಿನ ಮೋಡಗಳು
ಭುವಿಯ ಬೆಳಗೋ ಭಾಸ್ಕರನಿಗೆ
ಹಾಕುತಿದೆಯೇ ಸವಾಲು..??
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment