ದಣಿದ ರವಿಯನು
ಕಡಲಾಳಕ್ಕೆ ದೂಡಿ,
ಜಗವನಾವರಿಸಿ
ಜನರ ದೃಷ್ಟಿಯಿಂದ
ಎಲ್ಲವನೂ
ಮರೆಮಾಚುವಂತೆ
ಮಾಡಿದ ಇರುಳರಾಜನಲಿ
ಭಿನ್ನವಿಸಿದೆ,
ಕಾಡುತಿರುವ
ನನ್ನವಳ ನೆನಪನ್ನು
ಕಾಣಿಸದಂತೆ
ಮಾಡುವೆಯಾ ಎಂದೆ,
ಈಗ ನೋಡಿದರೆ
ನೇಸರನ ಸೋಲಿಸಿದವನ
ಪೌರುಷವೇ ಅಡಗಿಹೋಗಿದೆ,
ಈಡೇರಿಸಲಾಗದ
ನನ್ನ ಬೇಡಿಕೆಯು
ಅವನ ಕತ್ತನ್ನೇ ಬಾಗಿಸಿದೆ.
---ಕೆ.ಗುರುಪ್ರಸಾದ್
No comments:
Post a Comment