Tuesday 21 August, 2012

ಈಡೇರದ ಬೇಡಿಕೆ..



ದಣಿದ ರವಿಯನು
ಕಡಲಾಳಕ್ಕೆ ದೂಡಿ,
ಜಗವನಾವರಿಸಿ
ಜನರ ದೃಷ್ಟಿಯಿಂದ
ಎಲ್ಲವನೂ
ಮರೆಮಾಚುವಂತೆ
ಮಾಡಿದ ಇರುಳರಾಜನಲಿ
ಭಿನ್ನವಿಸಿದೆ,
ಕಾಡುತಿರುವ
ನನ್ನವಳ ನೆನಪನ್ನು
ಕಾಣಿಸದಂತೆ
ಮಾಡುವೆಯಾ ಎಂದೆ,
ಈಗ ನೋಡಿದರೆ
ನೇಸರನ ಸೋಲಿಸಿದವನ
ಪೌರುಷವೇ ಅಡಗಿಹೋಗಿದೆ,
ಈಡೇರಿಸಲಾಗದ
ನನ್ನ ಬೇಡಿಕೆಯು
ಅವನ ಕತ್ತನ್ನೇ ಬಾಗಿಸಿದೆ.

---ಕೆ.ಗುರುಪ್ರಸಾದ್



No comments:

Post a Comment