Tuesday, 28 August 2012

ವ್ಯರ್ಥ ನಿರೀಕ್ಷೆ.

ಮೌಢ್ಯದ ಕತ್ತಲು ಸರಿದು
ನನ್ನ ಮನವೆನುವ
ಭುವಿಯ ಮೇಲೆ
ಕಾವ್ಯರವಿಯ ಆಗಮನದ
ನಿರೀಕ್ಷೆಯಲಿದ್ದೆ..
ಸೂರ್ಯೋದಯ ಆಗಲೇ ಇಲ್ಲ
ಈಗ ಮನಸ್ಸಿಗೆ ಬೇಸರ
ಇದಕಾಗಿ ಬಲು ಬೇಗನೆದ್ದು
ಹಾಳು ಮಾಡಿಕೊಂಡೆನಲ್ಲ
ನನ್ನ ಸೊಗಸಿನ ನಿದ್ದೆ.

No comments:

Post a Comment