Tuesday 21 August, 2012

ಪಲಾಯನ

ಚಿನ್ನದ ಮೊಟ್ಟೆಯೆಂದು
ಭಾವಿಸಿ ಆಗಸದಿಂದ
ಕದ್ದು ತನ್ನ ಒಡಲಿನ
ಬಂಧನದಲ್ಲಿಟ್ಟ ಕಡಲರಾಜನಿಗೆ,
ಮುಸುಕಿನ ಮುಂಜಾನೆಯಲಿ
ಚಳ್ಳೆಹಣ್ಣು ತಿನ್ನಿಸಿ;
ಕೆಂಪು ಬಟ್ಟೆಯ
ಹೊದ್ದು ಮೂಡಣದ
ದ್ವಾರದಿಂದಲಿ ಹೊರಗೋಡಿ,
ಮೋಡದ ಮರೆಯಲ್ಲೇ
ತನ್ನೂರು ಸೇರಿ ನಿಟ್ಟುಸಿರ ಬಿಟ್ಟು
ಸಂತಸದಿ ನಗುತ್ತಿದ್ದಾನೆ
ನೇಸರ, ಜಗವನೆಲ್ಲಾ ಬೆಳಗಿಸಿ.

No comments:

Post a Comment