Tuesday 15 March, 2011

SOORYASTHA

ಮತ್ತೊಂದು ದಿನದ ಅಂತ್ಯಕೆ
ನಾಂದಿ ಹಾಡಿದನು ಸೂರ್ಯನು
ಮತ್ತೊಂದು ಇರುಳ ಜನನಕೆ
ರವಿಯು ತನ್ನ ತಾ ಕೊಂದನು.

ಪೂರ್ವದಿಂದ ಪಶ್ಚಿಮಕೆ ದಿನವಿಡೀ ನಡೆದು
ಬಂದ ಹಾದಿಯನು ನೋಡಿ ಬಸವಳಿದು
ದಣಿವು ತಂದ ಬಾಯಾರಿಕೆಯ ತೀರಿಸಲು 
ನೀರ ಕುಡಿಯ ಹೋಗಿ ನೀರೊಳಗೆ ಮುಳುಗಿದನು.

ಮುಡುತಿರಲು ಮುಡಣಕೆ ರಂಗು
ಮುಳುಗುತಿರಲು ಪಡುವಣಕೆ ರಂಗು
ಬದುಕಿ ಬಾಳುವ ಹಗಲಿನಲಿ ಬಳಲಿದನು
ಇಡಿಯ ಜಗಕೆ ಕೊಡುತಲಿ ಬೆಳಕು

ಪಯಣದ ಉದ್ದಕ್ಕೂ ತಾನೋರ್ವನೆ ಬೆಳಗಿ
ಬೆಳಕ ಸೆರೆಯಾಳಾಗಿಹ ತಾರೆಯರ ಕಂಡು ಮರುಗಿ
ಬಂಧ ಮುಕ್ತರನ್ನಾಗಿಸಿ ನುಡಿದನು "ನೀವಿನ್ನು ಮಿನುಗಿ"
ಕಡಲ ತಳದ ಸೆರೆಮನೆಯಲಿ ತಾ ಸೆರೆಯಾಳಾಗಿ.




  



No comments:

Post a Comment