Saturday, 15 October 2011


ಮೃತ್ಯು

ಆಸೆಗಳನು ತೊರೆದವನಿಗೆ ಅದೇ ಏಕೈ ಆಸೆ
ಆಸೆಗಳ ಹೊತ್ತವನಿಗೆ ಅದು ಅತ್ಯಂತ ಕೆಟ್ಟ ಗಳಿಗೆ
ಯೋಗಿಯೋರ್ವನಿಗೆ ಅದು ಸಂತಸದ ಕ್ಷಣ
ಯೋಧನೋರ್ವನಿಗೆ ಅದು ವೀರತ್ವದ ಸಂಕೇತ
ಆತ್ಮಹಂತಕನಿಗೆ ಅದು ಪರಮೋಚ್ಛ ಗುರಿ
ಆಂಜನೇಯನಿಗೋ ಅದು ಎಟುಕಲಾರದ ಹಣ್ಣು
ಕವಿಗೆ ಅದು ಕವಿತೆಯ ಕೊನೆಯ ಸಾಲಿನ ಪೂರ್ಣ ವಿರಾಮ
ರವಿಗೆ ಅದು ದಿನ ನಿತ್ಯದ ಸಾಮಾನ್ಯ ನೋಟ
ಕೊಲೆಯ ಮಾಡುವವಗೆ ಅದು ಕಾಯಕ
ಅಪರಾಧಿಗೆ ಅದು ನ್ಯಾಯಾಲಯದ ಅತಿ ದೊಡ್ಡ ಉಡುಗೊರೆ
ಒಟ್ಟಿನಲಿ, ನೋಡಿ ಅಪರಿಚಿತ; ಕೇಳಿ ಪರಿಚಿತ.
ಯಾವ ಕ್ಷಣದಲಿ ಯಾವ ಸ್ಥಳದಲಿ ಯಾವ ಸ್ಥಿತಿಯಲಿ
ಬರುವುದೋ ತಿಳಿಯದು ನಮ್ಮ ಬಾಳ ಪಯಣದಲಿ
ಜಾತಿ, ಅಂತಸ್ತುಗಳ ಬೇಧವಿಲ್ಲದೆ ಬರುವುದು ಮಾತ್ರ ಖಂಡಿತ
ಬಂದೊಡನೆ ಸಿಗುವುದು ನಾವುಗಳೆಂಬ ಹಕ್ಕಿಗೆ
ಸಮಸ್ಯೆಗಳೆಂಬ ಪಂಜರದಿಂದ ಆಗಸದೆಡೆಗೆ ಹಾರುವ ಸ್ವಾತಂತ್ರ್ಯ.

No comments:

Post a Comment