Sunday 23 October, 2011


ಮಳೆ

ನನ್ನ ದೇಹಕ್ಕಂಟಿಕೊಂಡಿದೆ
ನರರು ಮಾಡಿರುವ ಪಾಪದ ಕೊಳೆ
ಈ ಹೊಲಸು ಕೊಳೆಯನು
ನೀನಾದರೂ ಬಂದು ತೊಳೆ
ಎಂದು ಮೇಘರಾಜನೊಡನೆ
ಹೇಳಿರುವಳೇನೋ ಇಳೆ
ಅದಕಾಗಿಯೆ ಇರಬೇಕು
ಬರುತಿರುವುದು ಜೋರಾದ ಮಳೆ.

No comments:

Post a Comment