Tuesday 15 January, 2013

ರಹಸ್ಯ..

ರವಿಯು ಆಗಸದ ಪೂರ್ತಿ
ತನ್ನವಳ ಹಗಲಿಡೀ ಹುಡುಕಾಡಿ
ಸಿಗದೆ ಹೋದಾಗ ನಿರಾಶನಾಗಿ
ಸಂಜೆಯಲಿ ಕಡಲ ಮರೆಗೋಡಿ
ಮನಸಾರೆ ಅತ್ತಿರಲೇಬೇಕು,
ಕತ್ತಲೆಡೆಯಲ್ಲಿ ಅತ್ತಿದ್ದು
ಲೋಕದ ಕಣ್ಣಿಗೆ ಕಾಣಿಸಲಿಲ್ಲವೆಂದು
ಮನದೊಳಗೆ ತನ್ನ ತಾ
ಸಂತೈಸಿಕೊಂಡಿದ್ದಿರಬೇಕು,
ಆದರೆ ಹಾಳು ಕಡಲ ನೀರು
ತನ್ನ ಬಳಿ ಬಂದವರಿಗೆಲ್ಲಾ
ಕಣ್ಣೀರ ರುಚಿಯನು ಉಣಬಡಿಸಿ
ರವಿಯ ಅಳುವಿನ
ರಹಸ್ಯವ ಬಯಲುಗೊಳಿಸಿತ್ತು

No comments:

Post a Comment