ನಾಲ್ಕು ದಿಕ್ಕಿಗೆ ಮುಖಮಾಡಿ
ಕುಳಿತಿಹ ನಾಲ್ಕು ಸಿಂಹಗಳೇ
ಕಾವಲು ಭಟರು...
ನಡುವೆ ಉದ್ದನೆಯ ಕಂಬ,
ಗಗನವನು ಚುಂಬಿಸಲು
ಹೊರಟ ತ್ರಿವರ್ಣಿಗೆ ಮಾರ್ಗದರ್ಶಿ..
ಆ ಪಥದಾದಿಯಲಿ
ಪಾಶ ಬಂಧನಕೊಳಗಾಗಿ
ಮುದುಡಿ ಕುಳಿತು...
ಮೆಲ್ಲಮೆಲ್ಲನೆ ಮೇಲೇರಿ
ತುದಿಯ ತಲುಪಿದೊಡನೆ
ಬಂಧನವ ಕಳಚಿ, ಅರಳಿ
ತನ್ನೊಳಗಿನ ಪುಷ್ಪವನೇ
ಮಳೆಯಾಗಿಸಿ....
ಬೀಸುವ ಗಾಳಿಯ ನಿರ್ದೇಶನಕೆ
ತಕ್ಕಂತೆ ಕುಣಿದಾಡುವ
ನಮ್ಮಭಿಮಾನದ ಸಂಕೇತಕೆ
ನನ್ನದಿದೋ ವಂದನೆ...
ಭರತಖಂಡದ ಮಕ್ಕಳೆಲ್ಲರೆದೆಯಲಿ
ರಾಷ್ಟ್ರಪ್ರೇಮವ ದೀಪ ಉರಿಸುವ
ಸ್ಪೂರ್ತಿ ಚಿಲುಮೆಗೆ
ಇದೋ ಅಭಿನಂದನೆ....
No comments:
Post a Comment