Wednesday 2 March, 2011

MANADINGITHA

ನೀಲಿ ನೀಲಿ ನೀರಿನಲೆಯಲಿ
ಈಜುತಿದ್ದ ಮೀನು ನಾನಾಗಿದ್ದೆ.
ಕಂಡು ನನ್ನ, ಬೀಸಿಬಿಟ್ಟಳು ಪ್ರೇಮ ಜಾಲವ
ಮುಢ ನಾ ಅದರೊಳಗೆ ಬಿದ್ದೆ.

ಮನಸು ಕರಗಿತು, ಮೇಣ ರೂಪದಿ
ಉರಿದು ಪ್ರೀತಿಯ ಬೆಂಕಿಯಲಿ
ಪ್ರೀತಿ ಹಕ್ಕಿಯ ರೆಕ್ಕೆ ಮುರಿಯಿತು
ಅವಳ ಮೋಸ ಅರಿವಾದ ಕ್ಷಣದಲಿ

ದೋಣಿ ಏರಿದ್ದೆ ಜೀವನದ ಯಾನಕೆ
ಸುಖವೆಂಬ ತೀರವ ಸೇರುವಾಸೆಗೆ
ಪ್ರೀತಿ ಎನುವ ತೂತು ಉಂಟಾಯಿತು
ದುಃಖದ ತಳವ ಸೇರುತಿದೆ ನಾವೆಯೀಗ ಮೆಲ್ಲಗೆ

ತನುವು ನಿಶ್ಚಲವಾದ ಸಮಯದಿ
ಮನಸು ನಿಶ್ಚಲವಾಗುವುದು ನಿಶ್ಚಿತ
ಆದರೆ ಮನಸು ಸಾವನು ಪಡೆದ ಮೇಲೆಯು
ತನುವಿಗುಸಿರಿರುವುದರಲಿ ಇದೆಯೇ ಅರ್ಥ?



1 comment: