Thursday 5 December, 2013

ಖುದಿರಾಮ್ ಬೋಸ್...


ತನ್ನ ಹೊತ್ತವಳ
ದಾಸ್ಯವನು ಕಂಡು
ನೆತ್ತರದೆಷ್ಟು ಕುದಿಯುತಿತ್ತೋ...?
ಮನದಿ ನಿರ್ಧರಿಸಿ
ಸಿಡಿಸಿಯೇ ಬಿಟ್ಟ.
ಶತ್ರು ಪಾಳಯದಲಿ
ಬಾಂಬೊಂದನು,
ಎಳೆಯ ಪ್ರಾಯದಲಾತ;
ಹದಿನೆಂಟು ವರ್ಷ,
ಏಳು ತಿಂಗಳು,
ಹನ್ನೊಂದು ದಿನದಲೇ
ನೇಣು ಕುಣಿಕೆಗೆ
ಕೆಚ್ಚೆದೆಯಲಿ ಕೊರಳೊಡ್ಡಿದ,
ಭಾರತ ಮಾತೆಯು
ತೊಡಿಸಿದ ಹಾರವೆನುತ.

---ಕೆ.ಗುರುಪ್ರಸಾದ್

ಅತ್ಯಂತ ಎಳೆಯ ಪ್ರಾಯದಲ್ಲಿ ಗಲ್ಲು ಶಿಕ್ಷೆಗೊಳಗಾದ " ಹರೇನ್ ಸರ್ಕಾರ್ " ಎನ್ನುವ ಗುಪ್ತನಾಮದ ಬಂಗಾಲದ ಯುವಕ್ರಾಂತಿಕಾರಿ " ಖುದಿರಾಮ್ ಬೋಸ್ "ರ ಜನನ ದಿನದಂದು ಅವನಿಗೊಂದು ನನ್ನ ನುಡಿ ನಮನ.... ಅವರ ಜೀವನಗಾಥೆಯು ನಮ್ಮ ರಕ್ತವನ್ನೂ ಕುದಿಯುವಂತೆ ಮಾಡಲಿ ಎನ್ನುವುದೇ ನನ್ನ ಆಸೆ...

No comments:

Post a Comment