Thursday 5 June, 2014

ನೆಮ್ಮದಿ...



ಮುಳುಗೋ ಸೂರ್ಯನಿಗೂ
ಇಂದು ನಿರಾಳತೆಯ ಭಾವ,
ಕಳೆದ ಹತ್ತು ವರ್ಷಗಳ
ಭಾರತಿಯ ಸಂಕಟಕಿಂದು
ಮುಕ್ತಿ ಸಿಕ್ಕಿದುದ ಕಣ್ಣಾರೆ ಕಂಡ,
ಕುತ್ತಿಗೆಯ ಬಿಗಿದು
ಹಿಡಿದಿದ್ದ " ಕೈ "ಯಿಂದ
ತಪ್ಪಿಸಿ ದೀರ್ಘಶ್ವಾಸವ
ಒಳಗೆಳೆದುಕೊಂಡುದುದ ಕಂಡ,
ಭಗವಂತ ನೆಲೆಸಿರೋ
ಭೂತಾಯಿಯ ಹೃದಯ
"ಕಮಲ" ಅರಳಿದುದ ಕಂಡ,
ಕಂಡು ಚಿಂತೆಗಳ ತೊರೆದು
ನಿಟ್ಟುಸಿರ ಬಿಟ್ಟು ಮರೆಯಾಗುತ
ನೆಮ್ಮದಿಯ ಸವಿಯನುಂಡ.

No comments:

Post a Comment