Thursday 5 June, 2014

ಕಾಲಚಕ್ರ...



ಭಳಿರೆ ಭಗವಂತ ನಿನ್ನಾಟ...
ಕಾಲಚಕ್ರದಲಿ
ನಾನೆಂದೂ ಮೇಲೆಯೇ
ಎನುವವನಿಗೆ ಕಲಿಸಿದೆ ಬುದ್ಧಿ,
ತಂದೊಡ್ಡಿದೆ ನರಹಂತಕನೆನುವ
ಕಿರೀಟ ತೊಡಿಸಿದವನಿಗೆ
ಅದೇ ಕಿರೀಟಕೆ
ತಲೆಯೊಡ್ಡಬೇಕಾದ ಪರಿಸ್ಥಿತಿ,
ಭಳಿರೆ ಭಗವಂತ ನಿನ್ನಾಟ..
ಗೋವಿನ ಪ್ರಾಣದ ಬೆಲೆಯ
ವಸೂಲಿ ಮಾಡಿಯೇ ಬಿಟ್ಟೆ.
ಅಧರ್ಮದ ಗದ್ದುಗೆಯಲಿದ್ದ
ನಾಯಕನ ಬಾಯಿಗೆ
ದೊಡ್ಡ ಬೀಗವನೆ
ಜಡಿದು ಬಿಟ್ಟೆ...
ಎಲ್ಲುಂಟು ಸಾಲು ಮೈಕುಗಳು...?
ಎಲ್ಲುಂಟು ಚರ್ಚೆಯ ವೇದಿಕೆಗಳು...?
ಎಲ್ಲರಿಗೂ " ಕೈ - ಕೈ "
ಹಿಸುಕಿಕೊಳ್ಳುವಾಸೆ...
ಕಾಲಚಕ್ರದಡಿಯಲ್ಲಿ
ಬಿದ್ದಿದ್ದರೂ ಮೀಸೆಗೆ
ಮಣ್ನಾಗಲಿಲ್ಲ ಎಂದು
ತೋರ್ಪಡಿಸುವಾಸೆ..

No comments:

Post a Comment