Thursday 5 June, 2014

ಜೀವನ...



ಜೀವನವೇ ಹಾಗೆ..
ಕಲ್ಲುಗಳ ಕಷ್ಟಗಳ
ನಡುವೆಯೇ...
ತಲೆಯೆತ್ತಬೇಕು...
ಅವರಿವರ
ಕಟುನುಡಿಯ
ಕೊಳೆತೆಲೆಗಳನೇ
ಗೊಬ್ಬರವಾಗಿಸಿ
ಚಿಗುರೊಡೆಯಬೇಕು
ಬೆಳೆಬೆಳೆದು
ಹೆಮ್ಮರವಾಗಿ
ತಾ ನಿಂತ
ನೆಲಕೆ ಸೇವೆಯ
ನೆರಳುಣಿಸಬೇಕು

---ಕೆ.ಗುರುಪ್ರಸಾದ್
3K ಗುಂಪಿನ ಚಿತ್ರಕ್ಕೆ ಬರೆದ ಸಾಲು..

No comments:

Post a Comment