Wednesday 31 December, 2014

ಹಣೆ-ಬರಹ


ಹಣೆಬರಹವನು
ಬರೆವವನು
ಹಣೆಯಲ್ಲಿ
"ಬರಹಗಾರ"
ಎಂದು
ಬರೆಯದೇ
ಹೋದರೆ
ಹೇಗೆ
ತಾನೇ
ಬರಹಗಳು
ಹುಟ್ಟೀತು...?
ಪದಗಳ
ಬೀಜವನು
ಉದಾರವಾಗಿ
ಕೊಟ್ಟು
ನಿನ್ನ ಪರಿಶ್ರಮದ
ಬೆವರ ಸುರಿಸಿ
ಬಿತ್ತಿಕೋ ಎಂದು
ಕಾಲಕಾಲಕ್ಕೆ
ಯೋಚನೆಗಳ
ಮಳೆ ಸುರಿಸಲಷ್ಟೇ
ತಾನೇ ಸಿಗುವುದು
ಉತ್ತಮ ಫಸಲು.
ಆದರೂ ನಮ್ಮಗೆಲ್ಲಾ
ಅದು ನನ್ನ
ಸ್ವಂತದ್ದೆನುವ ಅಮಲು

No comments:

Post a Comment