Monday 29 September, 2014

ನಮನ


ಕೊರಳ ಸುತ್ತಿಕೊಂಡ
ಹುರಿಹಗ್ಗವದು
ಹಿಸುಕಿ ಉಸಿರ
ಮೆಲ್ಲಮೆಲ್ಲನೆ
ನಿಲ್ಲಿಸುತ್ತಿದ್ದರೂ...
ತಾಯಿ ಭಾರತಿಯ
ಭಕ್ತಿ ಗೀತೆಯ
ಸ್ಪೂರ್ತಿಯ ಶ್ರುತಿಯನು
ತಪ್ಪಲು ಬಿಡಲೇ ಇಲ್ಲ....
ತಾ ಹಾಡುವುದ
ನಿಲ್ಲಿಸಿದರೂ,
ದೇಶಭಕ್ತಿಯ ಕ್ರಾಂತಿ
ಸಂಗೀತದ ಪಾಠವನು
ಭರತ ಕುವರರಿಗೆ
ಹೇಳಿಕೊಟ್ಟ ಭಗತನಿಗೆ
ನಮಿಸದಿದ್ದರೆ,
ಈ ಸ್ವಾತಂತ್ರ್ಯದ
ರುಚಿಯನನುಭವಿಸಲು
ನಮಗೆ ಯೋಗ್ಯತೆಯೇ ಇಲ್ಲ..

1 comment:

  1. ಮರೆತಿರುವ ನಮ್ಮಂತಹ ಕುರುಡರಿಗೆ ಭಗತ್ ಅವರೊಡನೆ ಇನ್ನಿತರ ಹುತಾತ್ಮ ಹೋರಾಟಗಾರರ ಕ್ಷಮೆ ಇರಲಿ! :(

    ReplyDelete